ಕೊಂಡಿಗಳು ಮತ್ತು ಮುಳ್ಳುಬೇಲಿಗಳು

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 75

₹ 10.00




Year of Publication: 1992
Published by: ಭಾಗ್ಯ ಪ್ರಕಾಶನ
Address: ನಂ.705, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010

Synopsys

‘ಕೊಂಡಿಗಳು ಮತ್ತು ಮುಳ್ಳುಬೇಲಿಗಳು’ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಮೊದಲ ಕವನ ಸಂಕಲನ. ಈ ಕೃತಿಗೆ ಸಿ. ನಾಗಣ್ಣ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿ ಮತ್ತು ಕೃತಿಕಾರರ ಬಗ್ಗೆ ಬರೆಯುತ್ತಾ ‘ಸುಮಾರು ಇಪ್ಪತ್ತು ವರ್ಷಗಳ ನಮ್ಮ ಸುಧೀರ್ಘ ಸ್ನೇಹದಲ್ಲಿ ಪರಸ್ಪರರ ಕಾವ್ಯ ಜೀವನದ ಆರಂಭದ ಕ್ಷಣಗಳನ್ನು ಬಲ್ಲವರಾಗಿದ್ದೇವೆ. ಪದ್ಯಗಳು ಉದ್ಭವಾಸ್ಥೆಯಲ್ಲಿರುವಾಗಲೇ ಅವುಗಳ ಶಬ್ದಗಳನ್ನು ನುಡಿಗಟ್ಟುಗಳನ್ನು, ಸಾಲುಗಳನ್ನು, ಗುನುಗಿಕೊಂಡು ಸುಖ ಪಟ್ಟಿದ್ದೇವೆ. ಹಾಗಾಗಿ ಈ ಸಂಕಲನದ ಕವನಗಳ ಒಂದೊಂದು ನುಡಿಯೂ ನನಗೆ ಅತ್ಯಂತ ಚಿರಪರಿಚಿತವಾಗಿದೆ,ಆಪ್ತವಾಗಿದೆ’ ಎಂದಿದ್ದಾರೆ. ಜೊತೆಗೆ ದಲಿತ ಬದುಕಿನ ದುಃಖ, ದಾರುಣತೆಯನ್ನು, ಗ್ರಾಮ ಸಮಾಜದ ಕ್ರೌರ್ಯ, ಕಠೋರತೆಯನ್ನು ಬಾಲ್ಯದಲ್ಲಿ ಹತ್ತಿರದಿಂದ ಕಂಡುಂಡ ಸ್ವಾಮಿ ಪೊಲೀಸು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆಯವರು ಮೈಸೂರಿಗೆ ವರ್ಗವಾಗಿ ನೆಲೆಸಿದಾಗ ಕೌಮಾರ್ಯ, ಯೌವ್ವನವನ್ನು ಪಟ್ಟಣದಲ್ಲಿ ಕಳೆದರು ಆದರೂ ಹಳ್ಳಿಯ ಸಂಪರ್ಕದಿಂದ ಎಂದೂ ದೂರವಾದವರಲ್ಲ. ಕಾಲೇಜಿನಲ್ಲಿ ಕಾಮರ್ಸ್ ಕಲಿಯುತ್ತಿದ್ದಾಗಲೇ ಮ್ಯಾಗಜಿನ್ ನಲ್ಲಿ ಇವರ ಕವನಗಳು ಅಚ್ಚಾದವು, ಸ್ಪುರದ್ರೂಪಿಯಾದ ಇವರು ಆ ದಿನಗಳಲ್ಲಿ ಪ್ರೇಮ ಕವನಗಳ ಕರೆಗೆ ಓಗೊಟ್ಟದ್ದು ಅತ್ಯಂತ ಸಹಜವೇ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಇವರು ಬಹಳ ದೂರ ನಡೆದು ಬಂದಿದ್ದಾರೆ ಎನ್ನುವುದಕ್ಕೆ ಈ ಸಂಕಲನದ ಒಂದೊಂದು ಕವನವೂ ಸಾಕ್ಷಿಯಾಗಿವೆ ಎಂದಿದ್ದಾರೆ ಸಿ. ನಾಗಣ್ಣ. ದಲಿತ ಅನುಭವಗಳನ್ನು ಬೇರೆ ರೀತಿಯಲ್ಲೂ ಅಭಿವ್ಯಕ್ತಿಗೊಳಿಸಬಹುದು ಎಂಬುದನ್ನು ತೋರಿಸುವಲ್ಲಿ ಈ ಸಂಕಲನ ಸಫಲವಾಗಿದೆ ಎನ್ನಬಹುದು.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books