ಗುಬ್ಬಿಯೊಂದು ಗೂಡು ಕಟ್ಯಾದೊ

Author : ಬಸವರಾಜ ಸಬರದ

Pages 64

₹ 40.00




Year of Publication: 2005
Published by: ಪಲ್ಲವಿ ಪ್ರಕಾಶನ
Address: ಸರಸ್ವತಿಪುರ, ವಿಶ್ವವಿದ್ಯಾಲಯ ಅಂಚೆ, ಗುಲಬರ್ಗಾ- 585106

Synopsys

‘ಗುಬ್ಬಿಯೊಂದು ಗೂಡು ಕಟ್ಯಾದೊ’ ಲೇಖಕ ಡಾ.ಬಸವರಾಜ ಸಬರದ ಅವರ ಹಾಡುಗಳ ಸಂಕಲನ. ಕಟ್ಟುವುದು ಕಷ್ಟ ಕೆಡಹುವುದು ಸುಲಭ. ಗುಬ್ಬಿಯೊಂದು ಗೂಡುಕಟ್ಟುವ ಕ್ರಿಯೆಯೇ ತುಂಬ ಕುತೂಹಲಕಾರಿಯಾದುದು. ಈ ಕಟ್ಟುವ ಕ್ರಿಯೆ ನನಗೆ ಬಾಲ್ಯದಿಂದಲೇ ಪ್ರೇರಣೆ ನೀಡಿದೆಯ ಹೀಗಾಗಿ ನನ್ನ ಚಿಂತನೆಯೇನಿದ್ದರೂ ಯಾವಾಗಲೂ ಕಟ್ಟುವುದರ ಕಡೆಗೇ ಮುಖ ಮಾಡಿರುತ್ತದೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಈ ಸಂಕಲನದ ಕವಿತೆಗಳು ಹಾಡುಗಳಾಗಿ ಜನಮನ ಮುಟ್ಟಿವೆ. ಇಲ್ಲಿನ ಹಾಡುಗಳು ತುಂಬ ಸರಳವಾಗಿದ್ದು ಬೇರೆಬೇರೆ ಸಂದರ್ಭಕ್ಕಾಗಿ ಬರೆದವುಗಳಾಗಿವೆ. ಕರ್ನಾಟಕ ಸರಕಾರದ ಜಲಸಂಸ್ಕೃತಿ ಜಾಥಾಕ್ಕಾಗಿ ಕೆಲವು ಹಾಡುಗಳಿದ್ದರೆ, ಇನ್ನು ಕೆಲವು ಹಾಡುಗಳು ಧ್ವನಿಸುರುಳಿಗಾಗಿಯೇ ಬರೆದವುಗಳಾಗಿವೆ. ಇಲ್ಲಿ ಗುಬ್ಬಿಯೊಂದು ಗೂಡುಕಟ್ಯಾದೊ, ಕ್ಯಾದೀಗಿ ಬನವೆಲ್ಲ, ಅರಳ್ಯಾವೊ, ಗಿಳಿಯು ಕೂತು ಇಳೆಯ ಮುಗ್ಯಾದೊ, ಗೂಡಿನೊಳಗಿನ ಮಾಡ, ನೋಡಣ್ಣ, ಹಾವು ಕಚ್ಚಿತೊ, ಹೊನ್ನು ಬಿತ್ತ್ಯಾರೊ ಹೊಲದಾಗ, ಜಾತ್ರೆ ಮುಗಿಯಿತಣ್ಣ, ಬೆಳಕು ಕಾಣಿರೊ, ಇಳೆಯು ಹತ್ತಿ ಉರಿದಿದೆ, ನವಿಲು ಕುಣದಾವೊ ಸೇರಿದಂತೆ ಹಲವು ಗೀತೆಗಳು ಸಂಕಲನಗೊಂಡಿವೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books