ಬದುಕು ಬದಲಾಗಬೇಕು

Author : ಶರಣಬಸಪ್ಪ ವಡ್ಡನಕೇರಿ

Pages 35

₹ 20.00




Year of Publication: 2014
Published by: ಲಕ್ಷ್ಮಿ ಪ್ರಕಾಶನ
Address: ಡೊಂಗರಗಾಂವ, ತಾಲೂಕು ಕಲಬುರಗಿ, ಜಿಲ್ಲೆ ಕಲಬುರಗಿ

Synopsys

ಬದುಕು ಬದಲಾಗಬೇಕು-ಕವಿ ಶರಣಬಸಪ್ಪ ನಡ್ಡನಕೇರಿ ಅವರು ಚುಟುಕುಗಳ ಸಂಕಲನ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇಂದು ತೀವ್ರತೆರನಾಗಿ ಬೆಳೆದು ನಿಂತಿದೆ. ಜೊತೆಗೆ ಹಲವಾರು ರೀತಿಯಲ್ಲಿ ನಾವು ಸಾಹಿತ್ಯವನ್ನು ವಿಂಗಡಿಸಿ ಕೊಂಡಿದ್ದೇವೆ. ಅದರಲ್ಲಿ ಚುಟುಕು ಸಾಹಿತ್ಯವೂ ಒಂದು. ಚುಟುಕುಗಳು ಬರೆಯಲೇಬೇಕು.ಅಂದುಕೊಂಡು ಆಗಾಗ ಬರೆದ ಚುಟುಕುಗಳನ್ನು ಮತ್ತು ಚುಟುಕು ಗೋಷ್ಠಿಯಲ್ಲಿ ರಚನೆ ಮಾಡಿದ ಚುಟುಕುಗಳನ್ನೆಲ್ಲಾ ಒಂದೆಡೆ ಸಂಗ್ರಹಿಸಿ "ಬದುಕು ಬದಲಾಗಬೇಕು "ಎನ್ನುವ ಚುಟುಕು ಸಂಕಲನ ಹೊರ ತರಲಾಗಿದೆ ಎಂದು ಕವಿಗಳು ಹೇಳಿದ್ದಾರೆ.

ಸಂಕಲನದಲ್ಲಿ 50 ಚುಟುಕುಗಳು ಇದ್ದು, ಬದುಕು,ಗೆಳತಿ, ಪರೀಕ್ಷಾ ಕೊಠಡಿ, ಗಲ್ಲ ಬೆಲ್ಲ, ಪ್ರೇಮ,ಸಂಕ್ರಾಂತಿ ಮತ್ತು ಬದುಕು ಬದಲಾಗಬೇಕು ಎನ್ನುವ ಹಲವಾರು ಚುಟುಕುಗಳಿದ್ದು, ವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯಿಂದ ವಿಭಿನ್ನತೆಯನ್ನು ಕಾಯ್ದುಕೊಂಡಿವೆ.

About the Author

ಶರಣಬಸಪ್ಪ ವಡ್ಡನಕೇರಿ
(22 May 1980)

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...

READ MORE

Related Books