ಕದಂಬ ವೈಭವ

Author : ಬಿ.ಎಚ್. ಶ್ರೀಧರ

Pages 56

₹ 5.00




Year of Publication: 1989
Published by: ಸಾಹಿತ್ಯ ಮಂದಿರ
Address: ಮೈಸೂರು

Synopsys

‘ಕದಂಬ ವೈಭವ’ ಕೃತಿಯು ಬಿ.ಎಚ್. ಶ್ರೀಧರ ಅವರ ಕವನಸಂಕಲನವಾಗಿದೆ. ಕನ್ನಡ ನಾಡಿನ ಗತವೈಭವದ ಜಿಜ್ಞಾಸುಗಳಿಗೆ ಇದೊಂದು ಸ್ಪೂರ್ತಿದಾಯಕ ಕೃತಿಯಾಗಿದೆ. “ಕದಂಬ ವೈಭವ'' ವೊಂದು ಐತಿಹಾಸಿಕ ಖಂಡ ಕಾವ್ಯ. ಮೈಸೂರು ವಿ ವಿಯು ತನ್ನ "ಪ್ರಬುದ್ಧ ಕರ್ನಾಟಕ'ದಲ್ಲಿ ಇದರ ಮೌಲ್ಯಕ್ಕೆ ಮೆಚ್ಚಿ ಹಿಂದೆ ತನ್ನ ಸಂಚಿಕೆಗಳಲ್ಲಿ ಪ್ರಕಟಮಾಡಿತ್ತು. ಅದನ್ನೀಗ ಪುಸ್ತಕ ರೂಪಕ್ಕೆ ತರಲು ಪ್ರಯೋಜಿಸಲಾಗಿದೆ. ಈ ಕಾವ್ಯವು ಕವಿಯ ಸ್ವಾತಂತ್ರ್ಯದಿಂದ ಇತಿಹಾಸಕ್ಕೆ ಅಪಚಾರವೆಸಗದೆ ಹೊಸ ರಸಪೋಷಕ ಪಾತ್ರಗಳನ್ನೂ ಕಲ್ಪಿಸಿದೆ. ಅವುಗಳಲ್ಲಿ ಸ್ತ್ರೀ ಪಾತ್ರಗಳೆಂಬ ಗಣ್ಯ. ಇನ್ನೊಂದು ವೈಶಿಷ್ಟ್ಯವೆಂದರೆ ಕನ್ನಡದ ಹಾಡಂಗಬ್ಬದ ಜನಪ್ರಿಯ ಛಂದಸ್ಸೆನ್ನಿಸಿದ ಸಾಂಗತ್ಯದ ಶಾಸ್ತ್ರೀಯ ವೈವಿಧ್ಯಗಳೆಲ್ಲವನ್ನೂ ಇದು ತೋರಿಸಿದೆ.

About the Author

ಬಿ.ಎಚ್. ಶ್ರೀಧರ
(24 April 1918 - 24 April 1990)

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್‌ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...

READ MORE

Related Books