ತಪಸ್ಸಿಗಿಳಿದ ಮಳೆ

Author : ನಾಗಣ್ಣ ಕಿಲಾರಿ

Pages 80

₹ 80.00

Synopsys

 

ಕವಿ, ನಾಗಣ್ಣ ಕಿಲಾರಿ  ಅವರ ಕವಿತೆಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಾಯಿಭಾವಗಳಿಗೆ ಚರಿತ ನೆಲೆಯನ್ನು ಪರಿಚಯಿಸುತ್ತದೆ. ಮಾತುಕತೆಯ ಬಿಡುಬೀಸಿಗೆ, ಹಾಡಿನ ಗೀಳಿಗೆ, ಸ್ವಗತದ ನಿಷ್ಟುರ ಸತ್ಯಕ್ಕೆ ಅವರ ಪ್ರತಿಮೆಗಳು ಹೊರಳುತ್ತಿರುತ್ತವೆ. ಸುಡುವ ಸೌದೆ ಹೊತ್ತು ತಣ್ಣಗೆ ಒಲೆಯತ್ತ ನಡೆಯುವ ಮುದುಕಿಯರು, ಋಷಿಯಂತೆ ಉರಿಯುವ ದೀಪ, ಸುಖದ ಮಳೆ ಹೊಯ್ತು ಮೈತುಂಬ ಹೂಬ್ಯಾನಿ ಮುಂತಾದ ಅಸಲಿ ಚಿತ್ರಗಳಲ್ಲಿ 'ಕಿಲಾರಿತನ 'ಮಿಂಚುತ್ತದೆ. ಹಂಪೆಯ ಬಿಸಿಲು ಹಾಗೂ ಮಳೆಯ ರೂಪಕಗಳ ಅನಂತ ಅರ್ಥಸಾಧ್ಯತೆಗಳ ಕಡೆಗೆ ಈ ಎಳೆಯ ಕೈ ಮತ್ತೆ ಮತ್ತೆ ಚಾಚಿಕೊಳ್ಳುತ್ತದೆ; ಈ ಬಿಸಿಲು ಮಳೆಗಳ ಅನುಭವ ಹರೆಯದ ಮೈ ಮನಸ್ಸನ್ನೂ ಸಂಕೇತಿಸುತ್ತದೆ.

ಕವಿ ತಮ್ಮ ಓದು ಕವಿತೆಗಳಿಗೆ ಭಾರವಾಗದಂತೆ, ಕೇವಲ ಸಿದ್ದ ಅರ್ಥವಷ್ಟೇ ಮುಖ್ಯವಾಗದೆ ಅರ್ಥ ಶೋಧದ ಹಂಬಲದೊಂದಿಗೆ ಬರೆಯುವ, ಹೊಸ ರೂಪಕಗಳನ್ನು ನಿರ್ಮಿಸುವ ಶಕ್ತಿ ಇರುವ, ತಾತ್ವಿಕತೆಯನ್ನು ಸಮಗ್ರವಾಗಿ ಬಳಸಿಕೊಳ್ಳುವ ಧೈರ್ಯ ತೋರುವ, ಭಾವ, ವಿಚಾರ ಸಂಗತಿಗಳನ್ನು ತಕ್ಕಷ್ಟು ದೀರ್ಘವಾದ ರಚನೆಯಾಗಿ ವಿಸ್ತರಿಸುವ ಸಾಮರ್ಥ್ಯವಿರುವ ನಾಗಣ್ಣ ಕಿಲಾರಿಯವರ ಕವಿತೆಗಳು ಪ್ರಸ್ತುತವೂ ಹೌದು. 

About the Author

ನಾಗಣ್ಣ ಕಿಲಾರಿ
(01 June 1982)

ಹೊಸಪೇಟೆಯ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ನಾಗಣ್ಣ ಕಿಲಾರಿ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನವರು.  ಸಿದ್ಧಗಂಗಾ ಹೈಸ್ಕೂಲ್ ಮತ್ತು ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ನಾಗಣ್ಣ ಅವರು ಸಿಂಧನೂರು, ಮಸ್ಕಿ ಪದವಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಭರವಸೆ ಮೂಡಿಸಿರುವ ಕವಿಗಳಲ್ಲಿ ಒಬ್ಬರಾಗಿರುವ ನಾಗಣ್ಣ ಅವರು ನಾಲ್ಕು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಲಂಕೇಶ್ ಅವರ ನೀಲು ಪದ್ಯಗಳ ಕುರಿತು 'ಪ್ರೇಮ ಮೀಮಾಂಸೆ' ಪ್ರಕಟವಾಗಿದೆ. ...

READ MORE

Related Books