ಮತ್ತೆ ಹುಟ್ಟಿತು ಕವನ

Author : ಸಂಗಮೇಶ ತಮ್ಮನಗೌಡ್ರ

Pages 60

₹ 15.00




Year of Publication: 1998
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582102

Synopsys

ಸಂಗಮೇಶ ತಮ್ಮನಗೌಡ್ರ ಅವರ ಮೂರನೇ ಕವನ ಸಂಕಲನ-ಮತ್ತೆ ಹುಟ್ಟಿತು ಕವನ. ಇಲ್ಲಿ ಒಟ್ಟು 44 ಕವನಗಳಿವೆ. ಕೃತಿಗೆ ಮುನ್ನುಡಿ ಬರೆದ ಡಾ. ವೀರಣ್ಣ ರಾಜೂರು ‘ಕನ್ನಡ ಕಾವ್ಯ ಪರಂಪರೆಯ ಸತ್ವವವನ್ನು ಹೀರಿದ ಹಾಗೂ ರಮ್ಯ ಕವಿಗಳ ಪ್ರಭಾವ ಪಡೆದು ಬರೆದ ಬಹುತೇಕ ಕವಿತೆಗಳು ಭಾವಗೀತೆಗಳಾಗಿವೆ. ಪ್ರೀತಿ-ಪ್ರೇಮ-ಪ್ರಕೃತಿ, ಬಳಿತಿನ ಬಯಕೆ, ಬದುಕಿನ ಬವಣೆ, ಅನುಕಂಪ, ಅಧ್ಯಾತ್ಮ ಹೀಗೆ ಹತ್ತು ಹಲವು ಮಗ್ಗಲುಗಳಲ್ಲಿ ಕಾವ್ಯ ರಚನೆಗೊಂಡಿದೆ.ಬದುಕಿನಲ್ಲಿ ಸ್ವತಃ ಪಟ್ಟ ಬವಣೆ, ಬಿಟ್ಟಗಣ್ಣಿನಿಂದ ನೋಡಿದ ಈ ಲೋಕ ವೈಚಿತ್ರ್‍ಯ, ಮಾನವ ಸ್ವಭಾವದ ವೈರುಧ್ಯ, ಸಂಕಷ್ಟಗಳ ಮಧ್ಯೆಯೂ ಕಂಡುಕೊಳ್ಳುವ ಪ್ರೀತಿಪ್ರೇಮ ಸಹಗಜವಾಗಿ ಇಲ್ಲಿ ಕಾವ್ಯವಾಗಿ ಮೂಡಿವೆ ಎಂದು ಪ್ರಶಂಸಿಸಿದ್ದಾರೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books