ಕೆಚ್ಚೆನೆಲ

Author : ಲಲಿತಾ ಸಿದ್ದಬಸವಯ್ಯ

Pages 62

₹ 90.00




Year of Publication: 2004
Published by: ಚಿನ್ಮಯಿ ಪ್ರಕಾಶನ
Address: #5217, ಗುರುಸನ್ನಿಧಿ, 2ನೇ ಕ್ರಾಸ್ ಅಶೋಕ ನಗರ, ತುಮಕೂರು-572102
Phone: 95816229525

Synopsys

‘ಕೆಚ್ಚೆನೆಲ’ ಲಲಿತಾ ಸಿದ್ಧಬಸವಯ್ಯ ಅವರ ಪದ್ಯಗಳ ಸಂಕಲನ. ಈ ಸಂಕಲನಕ್ಕೆ 2004ನೇ ಸಾಲಿನ ಪು.ತಿ.ನ ಕಾವ್ಯ ಪ್ರಶಸ್ತಿ, ಹಾಗೂ 2004ನೇ ಸಾಲಿನ ಮಾಣಿಕಬಾಯಿ ಪಾಟೀಲ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಕೃತಿಗೆ ಬೆನ್ನುಡಿ ಬರೆದಿರುವ ಲಕ್ಷ್ಮೀಪತಿ ಕೋಲಾರ ಅವರು ಶ್ರೀಮತಿ ಲಲಿತಾ ಸಿದ್ಧಬಸವಯ್ಯನವರು ಪ್ರತಿಮೆಗಳಿಗೆ ಕಸಿಮಾಡಿ ಶಬ್ದತಾಂಡವದ ಮದವನ್ನು ಕಾಣದಂತೆ ಮಥಿಸಿ, ಲಲಿತ ಕಾವ್ಯದ ಜೀವ ಕೊನರಿಸಬಲ್ಲ ಕಾವ್ಯಸಾಹಸಶೀಲೆ. ಎಲ್ಲಿಂಂದ ಬರುವುದೋ ಅಜ್ಞಾತಕಾವ್ಯಸುಗ್ಗಿ ಎಂದು ಕಾದವರಿಗುತ್ತರ ಈ ಕೆಚ್ಚಿನೆಲೆ ಎಂದಿದ್ದಾರೆ. ಹಾಗೇ ಇವರ ಕವಿತೆಗಳ ಓದೆಂಬುದು ನನ್ನನ್ನೇ ತಡವಿಕೊಳ್ಳುವ ಅಥವಾ ಓದುಗರೆಲ್ಲರೂ ತಮ್ಮನ್ನೇ ತಡವಿನೋಡಿಕೊಳ್ಳುವಂತಹ ಭಾವವ್ಯಾಪಾರದ್ದು ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಅನುಭವ ಹಾಗೂ ನೆನಪುಗಳೊಂದಿಗಿನ ಶ್ರೇಷ್ಟ ಕಾವ್ಯಾನುಸಂಧಾನಕ್ಕೆ ಇಲ್ಲಿನ ಪದಪದವೂ ಪುರಾವೆಯಾಗಲು ತುದಿಗಾಲಲ್ಲೇ ನಿಲ್ಲುತ್ತವೆ. ಧನ್ಯವಾದದಂತಹ ಸ್ತ್ರೀಸಂವೇದನೆಯ ಮತ್ತೊಂದು ಅತ್ಯುತ್ತಮ ಕವಿತೆಯನ್ನು ನಾನಿನ್ನೂ ಓದಿಲ್ಲ. ಪರಿಸರ ಹಾಗೂ ಜಾಗತೀಕರಣದೆರಡೂ ಆತಂಕಮುಖಗಳಿಗೆ ಒಂದೇ ನಿರಾಳ ಕನ್ನಡಿ ಹಿಡಿವ ಹೊಸಬದುಕೆಂದರೆ ಬಗೆಯ ಕವಿತೆಗಳು ತಾತ್ವಿಕ ಉತ್ತುಂಗದ ಗುಂಗುಗಳನ್ನು ಎದೆ ಬಯಲಿಗೆ ಒಗೆದು ಹೋಗುತ್ತವೆ. ಭಾಷೆಯ ಅತಿ ಸಾಧಾರಣ ಪದಗಳಿಗೆ ಅಸಾಧಾರಣ ಸಂವೇದನೆಗಳನ್ನು ಒಯ್ಯುವ ಗುಣ ಇಲ್ಲಿನ ಕವಿತೆಗಳ ಜಾಯಮಾನವೆಂಬಂತಿದೆ. ಒಮ್ಮೆಲೆ ಪ್ರಬುದ್ಧ ಕವಿತೆಯಂತೆ ಹೊಡೆಚಾಚಿ ನಿಬ್ಬೆರಗುಗೊಳಿಸಿರುವ ಈ ಕವಿ ಇಷ್ಟುದಿನ ಎಲ್ಲಿ ಅಡಗಿ ಕುಳಿತಿದ್ದರೆಂಬ ಪ್ರಶ್ನೇ ನನ್ನೊಳಗಿನ್ನೂ ಹಬೆಯಾಡುತ್ತಿದೆ ಎಂದಿದ್ದಾರೆ ಲಕ್ಷ್ಮೀಪತಿ ಕೋಲಾರ.

About the Author

ಲಲಿತಾ ಸಿದ್ದಬಸವಯ್ಯ
(27 February 1955)

ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರು  ಬಿ.ಎಸ್ಸಿ. ಪದವೀಧರೆ. 27-02-1955 ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ. ‘ಮೊದಲ ಸಿರಿ, ಇಹದ ಸ್ವರ, ಬಿಡಿಹರಳು (ಹನಿಗವನಗಳು), ಕಬ್ಬಿನೆಲ, ದಾರಿನೆಂಟ, ಇನ್ನೊಂದು ಸಭಾಪರ್ವ’ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ‘ಮಿ. ಛತ್ರಪತಿ ಆನೆಘಟ್ಟ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಬಿ.ಎಂ.ಶ್ರೀ. ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಮಾಣಿಕಬಾಯಿ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಮುಂಬೈ ಹೊರನಾಡು ಪ್ರಶಸ್ತಿ, ಅಂಜೂರ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ’ ಲಭಿಸಿವೆ.  ...

READ MORE

Related Books