ಹಸುರು

Author : ಬೇಲೂರು ರಘುನಂದನ್

₹ 80.00




Year of Publication: 2012
Published by: ಶ್ವೇತಪ್ರಿಯ ಪ್ರಕಾಶನ
Address: ಕೊಡಿಗೇಹಳ್ಳಿ ಬೆಂಗಳೂರು
Phone: 9742606000

Synopsys

’ಹಸುರು’ ಕೃತಿಯು ಬೇಲೂರು ರಘುನಂದನ್ ಅವರ ಕವನಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ನಾಡೋಜ ಹಂಪನಾ, `ಕುವೆಂಪು ಎಂಬ ತ್ಯ್ರಕ್ಷರಿಯೆ ಜೀವ ಸ್ವರವಾಗಿರುವ ಕವನಸಂಕಲನ ‘ಹಸುರು’. ಬುದ್ದಿಭಾವಗಳಲ್ಲಿ ಕುವೆಂಪು ವಾಙ್ಞಯ ಅನುರಣಿಸುವಂತೆ ತಮ್ಮ ಕನಸುಮನಸುಗಳಲ್ಲಿ ಕುವೆಂಪುರವರ ಸಮಗ್ರ ಸಿದ್ದಿ ಸಾಧನೆ, ಸೃಷ್ಟಿ ಸಾಮರ್ಥ್ಯವನ್ನು ತುಂಬಿಕೊಂಡಿರುವ ಯುವ ಕವಿ ಬೇಲೂರು ರಘುನಂದನ. ಅದೆಷ್ಟು ಗಾಢತರವಾಗಿ ಮಹಾಕವಿಯ ಬದುಕು ಬರಹಗಳನ್ನು ಗುರಿಯಾಗಿ, ಆದರ್ಶವಾಗಿ ಆವಾಹಿಸಿಕೊಂಡಿದ್ದಾರೆ ಎಂಬುದಕ್ಕೆ ದಿವ್ಯ ಸಾಕ್ಷಿ ಹಸುರು ಸಂಕಲನದ ಕವಿತೆಗಳು. ರಘುನಂದನ ಕೇವಲ ಭಾವುಕ ನಾಯಕೋಪಾಸೆಯಲ್ಲಿ ವಿರಮಿಸಿದೆ, ಸೃಜನಾತ್ಮಕ ನೆಲೆಯಲ್ಲಿ,ಧ್ವನಿ ರಮ್ಯ ,ಮನೋಜ್ಞ ಕವಿತೆಗಳಲ್ಲಿ ಸೋಪಜ್ಞ ಚಿಂತನೆಗಳನ್ನು ಹಿಡಿದಿಟ್ಟಿದ್ದಾರೆ. ಕುಪ್ಪಳಿಯ ನೆಲ, ಜಲ, ನಿಸರ್ಗ, ಜೀವ, ಸಂಕುಲ, ತೇಜಸ್ವಿ, ಕವಿಶೈಲ-ಎಲ್ಲೆಲ್ಲೂ ಕುವೆಂಪು ಚೈತನ್ಯ ಉಸಿರಾಡುತ್ತಿರುವುದು ಈ ವರ್ಧಿಷ್ಟು ಕವಿ ಪ್ರತಿಭೆಯಲ್ಲಿ ಮಿಂದೆದ್ದು ಬರುವ ಪಂಕ್ತಿಗಳಲ್ಲಿ ಓದುಗರಿಗೆ ಹೃತ್ ಸಂವೇದ್ಯವಾಗುತ್ತದೆ. ಕುವೆಂಪು ಅವರನ್ನು ಕುರಿತು ಕನ್ನಡದಲ್ಲಿ ವಿಪುಲವಾದ ಬರವಣಿಗೆ ಹೊರಬಂದಿದೆ’ ಎಂದಿದ್ದಾರೆ.

About the Author

ಬೇಲೂರು ರಘುನಂದನ್
(21 May 1982)

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು.  ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ..  ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...

READ MORE

Related Books