ಬಾಳ ಕನಸು

Author : ಕೃಷ್ಣಮೂರ್ತಿ ಪುರಾಣಿಕ

Pages 97

₹ 1.00




Year of Publication: 1947
Published by: ಆರ್. ವಿ. ಜಾಗೀರದಾರ
Address: ಧಾರವಾಡ

Synopsys

ಲೇಖಕ ಕೃಷ್ಣಮೂರ್ತಿ ಪುರಾಣಿಕ ಅವರ ಕವನ ಸಂಕಲನ-ಬಾಳ ಕನಸು. ಕಾವ್ಯವು ಕಾಲದೊಂದಿಗೆ ಪರಿವರ್ತನೆಗೊಳ್ಳಬೇಕು. ಆದರೆ, ಮಲ್ಲಿಗೆಯ ಮಾರ್ದವತೆ ಬಿಡಬಾರದು. ಕಾವ್ಯದ ಹೃದಯಕ್ಕೆ ಕೂಸಿನ ಸರಳತೆ ಇರಲೇಬೇಕು. ಅಂದಾಗ ಮಾತ್ರ ಹೃದಯಲ್ಲಿ ಕಾವ್ಯ ಅಮೃತ ರಸವು ಇಳಿಯುತ್ತದೆ. ಆಗಲೇ ಓದುಗರು ಕಾವ್ಯವನ್ನು ಅನುಭವಿಸುತ್ತಾರೆ ಎಂದು ಕೃಷ್ಣಮೂರ್ತಿ ಸಹೋದರ ಶಂಕರ ಅವರು ಮುನ್ನುಡಿ ಬರೆದು ಹಾರೈಸಿದ್ದಾರೆ.

ಈ ಸಂಕಲನದಲ್ಲಿ ಒಟ್ಟು 31 ಕವಿತೆಗಳಿವೆ. ನಾಡು-ನುಡಿಯ ಪ್ರೇಮ, ಪ್ರಣಯ, ತಾಯ್ನಾಡು, ಕಲೆ, ಹರ್ಷ, ಗಾಂಧೀಜಿ, ಬಾಲ್ಯ ವಿವಾಹ ವಿರೋಧಿ ಮನಸ್ಸು, ಸಾಮಾಜಿಕ ಕಟ್ಟುಪಾಡುಗಳ ವಿರುದ್ಧ ಆಕ್ರೋಶ ಮುಂತಾದವು ಕಾವ್ಯ ವಸ್ತುಗಳಾಗಿವೆ.

About the Author

ಕೃಷ್ಣಮೂರ್ತಿ ಪುರಾಣಿಕ
(05 September 1911 - 09 November 1985)

ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು  ಬೆಳ್ಳೆತೆರೆ ಕಂಡಿವೆ.  'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...

READ MORE

Related Books