ತುತ್ತಿಗೂ ತತ್ವಾರ

Author : ಪೂರೀಗಾಲಿ ಮರಡೇಶಮೂರ್ತಿ

Pages 224

₹ 220.00




Year of Publication: 2018
Published by: ಲಿಖಿತ ಸ್ವರೂಪ್ ಪಬ್ಲಿಕೇಷನ್
Address: #60, 2ನೇ ಮಹಡಿ, ಅಲ್ಲಮಪ್ರಭು ಸಂಕೀರ್ಣ, ವೀರಶೈವ ಅನಾಥಾಲಯ ಕಟ್ಟಡ, 5ನೇ ಅಡ್ಡರಸ್ತೆ, ರಾಮಾನುಜ ರಸ್ತೆ, ರಾಜೇಂದ್ರ ಕಲಾಮಂದಿರ ಎದುರು, ಮೈಸೂರು.
Phone: 9449526390

Synopsys

'ತುತ್ತಿಗೂ ತತ್ವಾರ ' ಪೂರೀಗಾಲಿ ಮರಡೇಶಮೂರ್ತಿ ಅವರ ಕವನ ಸಂಕಲನ ಎಂದೋ ಬರುವ ಸುಖಗಳನ್ನು ನೀರೀಕ್ಷಿಸುತ್ತಾ ಕೂರದೆ ವಾಸ್ತವತೆಗೆ ಅನಿವಾರ್ಯವಾಗಿ ಬಲಿ ಬಿದ್ದ ಜನರ ಅಂತಃಕರಣ. ಇಂದಷ್ಟೇ ಅವಶ್ಯಕ ಎನ್ನುವವರ ಹಸಿವಿನ ಅನಾವರಣವೂ ಹೌದು. 'ತುತ್ತಿಗೂ ತತ್ವಾರ ' ಕೃತಿಯು ಅನ್ನದ ಎಳೆಗಳ ಮೇಲೆಯೇ ಬಿಂಬಿತವಾಗುತ್ತಾ ಹೋಗುತ್ತದೆ.

ಸಂಕಲನದ ನೂರು ಪದ್ಯಗಳು ಎಲ್ಲಿಯೂ ಕೂಡ ವಾಸ್ತವತೆಯ ಎಲ್ಲೆಗಳನ್ನು ದಾಟುವುದಿಲ್ಲ. ಈ 'ತತ್ವಾರ ' ಯಾವತ್ತಿನದ್ದೂ ಆಗಿರುತ್ತದೆ. ಇಲ್ಲಿ 'ತುತ್ತು ' ಹಸಿವು ನೀಗಿಸಿದರೆ, 'ತತ್ವಾರ ' ಹಸಿವನ್ನು ಕಾಡಿಸುತ್ತದೆ. ಸಂಕಲನದಲ್ಲಿ ಬರುವ 'ಅನ್ನದ ಮಕ್ಕಳು ', 'ಬರೇ ಸೊನ್ನೆ', 'ಉಣ್ಣುವ ಅನ್ನ ಒಂದೇ', 'ಹುಡುಕಾಟ', 'ತತ್ವಾರ', 'ಮಾನವತೆ ', 'ಅಕ್ಷರದ ಬೆಳಕಿನಲ್ಲಿ', 'ದೂರಗಾಮಿ', 'ಜಗುಲಿಕಟ್ಟೆ', 'ಮುರಿದ ಮನೆ', 'ಕಾಸಿನ ಕಥೆ', ಮುಂತಾದ ಕವಿತಾ ಶೀರ್ಷಿಕೆಗಳೇ ಸಂಕಲನದ ಹಿರಿಮೆಗೆ ಸಾಕ್ಷಿಯಾಗಿವೆ.

About the Author

ಪೂರೀಗಾಲಿ ಮರಡೇಶಮೂರ್ತಿ
(06 June 1966)

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...

READ MORE

Related Books