ಭಾವ ಕಸ್ತೂರಿ

Author : ಶೋಭಾ ಹರಿಪ್ರಸಾದ್‌

Pages 116

₹ 100.00




Year of Publication: 2022
Published by: ಹೆಚ್‌ ಎಸ್‌ ಆರ್‌ ಪ್ರಕಾಶನ
Address: ಅನ್ನಪೂಣೇಶ್ವರಿ ನಿಲಯ ,1ನೇ ಮುಖ್ಯ ರಸ್ತೆ , ಭೈರವೇಶ್ವರ ನಗರ ಬೆಂಗಳೂರು 560058
Phone: 7892793054

Synopsys

ಭಾವ ಕಸ್ತೂರಿ ಶೋಭಾ ಹರಿಪ್ರಸಾದ್‌ ಅವರ ಕವನ ಸಂಕಲವಾಗಿದೆ. ಭಾವಗೀತೆಗಳ ಪ್ರಪಂಚವು ಅತ್ಯಂತ ಅಪ್ಯಾಯಮಾನವಾದುದು. ಇದು ಕವಿಯ ಮನದಿಂದ ಹೊರಟು ಸಹೃದಯನ ಮನಸ್ಸಿನಲ್ಲಿ ಅಪಾರವಾದ ಉತ್ಸಾಹ ಉಲ್ಲಾಸಗಳ ತರಂಗಗಳನ್ನು ಎಬ್ಬಿಸಿ ತನ್ಮೂಲಕ ಅವನ ಮನಸ್ಸನ್ನು ಅಹ್ಲಾದಗೊಳಿಸುತ್ತದೆ. ಇದರಿಂದಾಗಿ ಸಹೃದಯನ ಮನ ಅತ್ಯಂತ ಖುಷಿಯನ್ನು ಅನುಭವಿಸುತ್ತದೆ. ಯಾವಾಗ ಕಾರಯಿತ್ರೀ ಪ್ರತಿಭೆಯು ಭಾವಯಿತ್ರೀ ಪ್ರತಿಭೆಯ ಜೊತೆಗೆ ಸಮ್ಮಿಲನಗೊಳ್ಳುತ್ತದೆಯೋ, ಆಗ ಆನಂದವು ಅತ್ಯಂತ ಆಪ್ತವಾಗುತ್ತದೆ. ಇಂತಹ ಆನಂದಮಯವೇ ಮಾನವನಿಗೆ ಮಾನಸೋಲ್ಲಾಸವನ್ನು ನೀಡುತ್ತದೆ. ಕಾವ್ಯವು ಯಾವಾಗಲೂ ಹೃನ್ಮನಗಳಿಗೆ ಭಾವ ಲಹರಿಯನ್ನು ತಲುಪಿಸುತ್ತದೆ. ಶೋಭಾ ಹರಿಪ್ರಸಾದ್‌ ರವರ ಭಾವ ಕಸ್ತೂರಿ ಎಂಬ ಕವನ ಸಂಕಲನದಲ್ಲಿ ಛಂದೋಬದ್ಧವಾದ ಕವಿತೆಗಳಿವೆ. ಅಲ್ಲದೆ ಲಯಬದ್ಧ ಸಾಲುಗಳಿವೆ. ವೃತ್ತಗಳ ಬಳಕೆ ಇದೆ. ಷಟ್ಟದಿಗಳು ಮಾಲೆ ಇದೆ, ಮಲ್ಲಿಕಾಮಾಲಾ ಲಯದ ಮೆರವಣಿಗೆ ಇದೆ ಅಲ್ಲದೆ ಮಾತ್ರಾಲಯದ ಮೋದವಿದೆ. ಇವರ ಪ್ರತಿಭೆಯನ್ನು ಅಳೆಯುವುದು ಸುಲಭ ಸಾಧ್ಯವಲ್ಲ ಎಂದು ಟಿ.ಎನ್‌ ಶಿವಕುಮಾರ್‌ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ

About the Author

ಶೋಭಾ ಹರಿಪ್ರಸಾದ್‌

ಶೋಭಾ ಹರಿಪ್ರಸಾದ್‌ ಮೂಲತಃ ಸಾಲಿಕೇರಿಯವರು. ತಾಯಿ ಲಲಿತಾ ಶೆಟ್ಟಿಗಾರ್ ತಂದೆ ನಾರಾಯಣ ಶೆಟ್ಟಿಗಾರ್. ಪ್ರಾಥಮಿಕ ವಿದ್ಯಾಭ್ಯಾಸವನ್ನು ವಿದ್ಯಾಮಂದಿರದ  ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ  ಪೂರ್ಣಗೊಳಿಸಿ  ಹೈಸ್ಕೂಲ್ ಮತ್ತು ಬಿ. ಎ ಪದವಿಯನ್ನು ಎಸ್ ಎಮ್ ಎಸ್ ಬ್ರಹ್ಮಾವರ ಕಾಲೇಜಿನಲ್ಲಿ ಪೂರ್ಣ ಗೊಳಿಸಿದರು.  ಮಂಗಳೂರಿನ‌ ಸರಕಾರಿ ಕಾಲೇಜಿನಲ್ಲಿ  ಬಿ.‌ಎಡ್. ಅನ್ನು ಪೂರ್ಣಗೊಳಿಸಿದ ಅವರು  ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ವರ್ಷದಿಂದ ತೊಡಗಿಸಿ ಕೊಂಡಿದ್ದಾರೆ. ಇವರು ಮೊದಲು ಬರೆದದ್ದು ಬೆರಳೆಣಿಕೆಯಷ್ಟು ಹನಿಗವನ ಮತ್ತು ಕತೆ. ರಾಜ್ಯ ಕವಿ ವೃಕ್ಷ  ಪ್ರಶಸ್ತಿ, ವ್ಯಾಕರಣ ಚೂಡಾಮಣಿ ಪ್ರಶಸ್ತಿ ಅವರಿಗೆ ದೊರೆತ ಪ್ರಶಸ್ತಿಗಳಾಗಿವೆ.  ಕೃತಿಗಳು  : ಚಿಣ್ಣರ ಕನಸಿನ ಬಣ್ಣದ ಲೋಕ ,ಬೇವು ...

READ MORE

Related Books