ದಿನದ ಪ್ರಾರ್ಥನೆ

Author : ಸವಿತಾ ನಾಗಭೂಷಣ

Pages 88

₹ 60.00




Year of Publication: 2024
Published by: ನುಡಿ
Address: ಎಚ್.ಐ.ಜಿ, 5ನೇ ಹಂತ, ವಿನೋಬ ನಗರ, ಶಿವಮೊಗ್ಗ-577204
Phone: 9481351079

Synopsys

‘ದಿನದ ಪ್ರಾರ್ಥನೆ’ ಸವಿತಾ ನಾಗಭೂಷಣ ಅವರ ಕವನಸಂಕಲನವಾಗಿದೆ. ಈ ಕೃತಿಯು ಎಲ್ಲಾ ತೆರನಾದ ವಿಚಾರಗಳ ಕುರಿತು ಮಾತನಾಡುತ್ತದೆ. ಕಾವ್ಯ ಎಂಬವುದು ಹೃದಯದ ಭಾವಾಭಿನಯ ಎನ್ನುವ ಕವಯಿತ್ರಿ ಇಲ್ಲಿ ತನ್ನ ಕವಿತೆಯ ವಸ್ತುಗಳನ್ನಾಗಿ ಮಳೆ, ಸಿಡಿಲು, ಮಿಂಚು, ಹೂವು, ಹೆಣ್ಣು, ಹಕ್ಕಿ, ಕೀಟ ಹೀಗೆ ಎಲ್ಲವುಗಳನ್ನು ಆಯ್ಕೆಮಾಡಿದ್ದಾರೆ. ಇಲ್ಲಿನ ವಿಚಾರಧಾರೆಗಳು ಕೂಡ ಎಲ್ಲದರೊಂದಿಗೆ ಒಡನಾಡಿಯಾಗಿ ಪದಗಳಿಗೆ ಜೀವನೀಡಿದೆ. ಪ್ರಕೃತಿ ಹಾಗೂ ಹೆಣ್ಣನ್ನು ಈ ಕವನಸಂಕಲನವು ಸಮಾನವಾಗಿ ಹಿಡಿದಿಟ್ಟಿದೆ. 60 ಕವನಗಳನ್ನು ಒಳಗೊಂಡಿರುವ ಈ ಕೃತಿಯು ಭಾಷಿಕವಾಗಿ, ಭಾವನೆಗಳ ಗುಚ್ಛವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದೆ. ಈ ಕೃತಿಯ ಆಯ್ದ ಒಂದು ಕವನ; ಮುಂದೆ ಒಂದು ದಿನ ಮುಂದೆ ಒಂದು ದಿನ ಬಾಳೆ ಕತ್ತರಿಸಿ ಎಸೆದಂತೆ ಕಟ್ಟಡಗಳ ನೆಲಸಮಗೊಳಿಸಿ ಕೆರೆಕಟ್ಟೆಗಳನ್ನಾಗಿಸಿ ಮಳೆನೀರ ತುಂಬಿಡುವರು ಹೊಂಡ ಗುಂಡಿ ಗಿಂಡಿ ಎನದೆ ನೀರ ತುಂಬಿಡುವರು ಬಾಳೆ ಕತ್ತರಿಸಿ ಎಸೆದಂತೆ ಕಟ್ಟಡಗಳ ಕಿತ್ತೆಸೆದು ಭತ್ತರ ರಾಗಿ ಜೋಳ ಹೂವು ಹಣ್ಣು ಬೆಳೆವರು ಬಯಲಲ್ಲಿ ಬಿಸಿಲಿಗೆ ಮೈಯೊಡ್ಡಿ ಬದುಕು ಮಾಡುವರು ರಾತ್ರಿ ಚಂದ್ರನ ಹೊದ್ದು ಕನಸು ಕಾಣುವರು! ಸಾಗರಗಳು ಸಾವಿರ ಇದ್ದರೂ ಸಲಹದಿದ್ದರೆ ಸುಡುಗಾಡು. 

About the Author

ಸವಿತಾ ನಾಗಭೂಷಣ

ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್‍ ...

READ MORE

Related Books