2013 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ `ಧ್ಯಾನಕೆ ತಾರೀಖಿನ ಹಂಗಿಲ್ಲ’ ಕೃತಿಯು 2012 ರ ಟೊಟೊ ಪುರಸ್ಕಾರದ ಹಸ್ತಪ್ರತಿ ಪ್ರಶಸ್ತಿಯನ್ನೂ ಪಡೆದಿತ್ತು. ಈ ಸಂಕಲನದಲ್ಲಿ 34 ಕವನಗಳಿವೆ. ವಿವರಗಳನ್ನು ಹೊಂದಿಸಿ ಹೆಣೆಯುವ ಕ್ರಮದಲ್ಲಿಯೇ ಕವನವೊಂದು ಅನುಭವದ ಅನಿರೀಕ್ಷಿತ ಮಜಲುಗಳನ್ನು ತೆರೆಯುತ್ತಾ ಕಟ್ಟುತ್ತಾ ಹೋಗುವ ಇಲ್ಲಿಯ ಕವನಗಳಲ್ಲಿ 'ಶೋಧ' ವೇ ಮೂಲಸ್ಥಾಯಿಯಾಗಿರುವಂತೆ ಕಾಣುತ್ತದೆ. ಸಾಮಾನ್ಯವಾಗಿ ಮೊದಲ ಪ್ರಯತ್ನದಲ್ಲಿ ಕಾಣಿಸುವ ಎಲ್ಲವನ್ನೂ ಹಿಡಿದುಬಿಡುವ ಆತುರ , ಹಿಡಿದುಬಿಟ್ಟೆನೆನ್ನುವ ಭ್ರಮೆ , ತೀರ್ಮಾನದ ದುಡುಕು, ಇಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಲೇಖಕ ವಿವೇಕ್ ಶಾನಭಾಗ್ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.
ಯುವ ಬರಹಗಾರ್ತಿ ಕಾವ್ಯ ಕಡಮೆ ನಾಗರಕಟ್ಟೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಹಾಗೂ ಅವರ ಜೀನ್ಸ್ ತೊಟ್ಟ ದೇವರು ಕವನ ಸಂಕಲನಕ್ಕೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ದೊರೆತಿದೆ. ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ, ಯುವ ಪುರಸ್ಕಾರ (2014)