ಮಾತು ಮೀಟಿ ಹೋಗುವ ಹೊತ್ತು

Author : ಸ್ಮಿತಾ ಅಮೃತರಾಜ್

Pages 110

₹ 120.00




Year of Publication: ‌2020
Published by: ಭಾವಸಿಂಚನಾ ಪ್ರಕಾಶನ
Address:  ಕುಣಿಗಲ್ ಜಿಲ್ಲೆ: ತುಮಕೂರು
Phone: 9036402083

Synopsys

ಲೇಖಕಿ ಸ್ಮಿತಾ ಅಮೃತರಾಜ್‌ ಅವರ ಕವನ ಸಂಕಲನ-ಮಾತು ಮೀಟಿ ಹೋಗುವ ಹೊತ್ತು. ಇಲ್ಲೆಯ ಬಹುತೇಕ ಕವನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಭೂಮಿ ತೂಗುವ ಹಕ್ಕಿ, ಅರಳು ಗುಲಾಬಿಯ ಹಿಂದೆ, ಸೋನೆ ಹನಿ ಹನಿದ ಹೊತ್ತು, ಹಣತೆ ಹಾಡುತ್ತಿದೆ, ಮಳೆ ಬರುವ ಕಾಲಕ್ಕೆ. ಹೀಗೆ ಒಟ್ಟು 25 ಕವನಗಳಿವೆ. ಹಿರಿಯ ಕವಿ ಬಿ. ಆರ್.‌ ಲಕ್ಷಣರಾವ್‌ ಮುನ್ನುಡಿ ಬರೆದು ‘ ತಮ್ಮ ಅನುಭವಕ್ಕೆ ದಕ್ಕಿದ ಪ್ರತಿಯೊಂದನ್ನು ಅರ್ಥಪೂರ್ಣ ರೂಪಕವಾಗಿಸುವ ಕಲೆ ಸ್ಮಿತಾ ಅವರಿಗೆ ದಕ್ಕಿದೆʼ ಎಂದು ಪ್ರಂಶಸಿದ್ದಾರೆ.

 

About the Author

ಸ್ಮಿತಾ ಅಮೃತರಾಜ್
(08 January 1978)

ಲೇಖಕಿ ಸ್ಮಿತಾ ಅಮೃತರಾಜ್, ಸಂಪಾಜೆ, ಗೃಹಿಣಿ ಮತ್ತು ಕೃಷಿಕ ಮಹಿಳೆ. ಕನ್ನಡ ಎಂ. ಎ.ಪದವೀಧರೆ. ಲಲಿತ ಪ್ರಬಂಧ,ಕವನ ಸಂಕಲನ,ಪುಸ್ತಕ ಪರಿಚಯ ಸೇರಿದಂತೆ ಒಟ್ಟು ಏಳು ಪುಸ್ತಕಗಳು ಪ್ರಕಟಗೊಂಡಿವೆ. ‘ಕಾಲ ಕಾಯುವುದಿಲ್ಲ’, ‘ತುಟಿಯಂಚಿನಲ್ಲಿ ಉಲಿದ ಕವಿತೆಗಳು’ ‘ಮಾತು ಮೀಟಿ ಹೋಗುವ ಹೊತ್ತು’ ಅವರ ಕವನ ಸಂಕಲನಗಳು. ‘ಅಂಗಳದಂಚಿನ ಕನವರಿಕೆಗಳು’, ‘ಒಂದು ವಿಳಾಸದ ಹಿಂದೆ’, ‘ನೆಲದಾಯ ಪರಿಮಳ’ ಮೂರು ಲಲಿತ ಪ್ರಬಂಧಗಳು. ‘ಹೊತ್ತಗೆ ಹೊತ್ತ’ ಪುಸ್ತಕ ಪರಿಚಯ. ಇವರ ಕೆಲವು ಕವಿತೆ ಮತ್ತು ಪ್ರಬಂಧಗಳಿಗೆ ಬಹುಮಾನಗಳು ಸಂದಿವೆ. ಇವರ ಕೆಲ ಕವಿತೆಗಳು ಇಂಗ್ಲಿಷ್ ಮತ್ತು ಮಲಯಾಳಂಗೆ ಅನುವಾದಗೊಂಡಿದೆ. ಒಂದು ಪ್ರಬಂಧ, ...

READ MORE

Related Books