ಕಡ್ಲೇಮಿಠಾಯಿ

Author : ಬಾಗೂರು ಮಾರ್ಕಾಂಡೇಯ

Pages 64

₹ 40.00




Year of Publication: 2013
Published by: ಅರ್ಕಾವತಿ ಪ್ರಕಾಶನ, ಬೆಂಗಳೂರು
Address: ನಂ. 2, 91/1, 2ನೇ ಮುಖ್ಯರಸ್ತೆ, ವಿ. ಆರ್. ಬ್ಲಾಕ್, ಜಿ.ಆರ್.ನಗರ, ಬೆಂಗಳೂರು-40
Phone: 9980873794

Synopsys

ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವನಗಳ ಸಂಕಲನ. 40 ಕವಿತೆಗಳಿದ್ದು ಮಕ್ಕಳ ಮನದ ಅತಿ ಪುಟ್ಟ ಪುಟ್ಟ ವಿಷಯಗಳು ಕವಿತೆಗಳಾಗಿವೆ. ಅವರ ಆಸೆಗಳು ಕುತೂಹಲ, ಪ್ರೀತಿ ಕವಿತಯ ರೂಪು ಪಡೆದುಕೊಂಡಿವೆ. ಅಂದ ಚಂದದ ಬಣ್ಣದ ಕೋಳಿ ಕೊಕ್ಕೋ ಕೊಕ್ಕೋ ಕೂಗುವುದು ಬೆಳಗಿನ ಜಾವದ ಸುಪ್ರಭಾತವನು ಊರಿನ ಜನತೆಗೆ ಹೇಳುವುದು..... ಹೀಗೆ ಹಳ್ಳಿಯ ಬದುಕಿನ ಚಿತ್ರಣವಿದ್ದರೆ... ‘ಗಾಳಿಯಲೇನೆ ಹಾರುತ್ತಾ ನೀಲಿಯ ಬಾನಲಿ ತೇಲುತ್ತಾ ಹಾರ್ತಾ ಇದ್ದೆ ನಾನು ಆಗ ಮಾತನಾಡಿತು ಬಾನು ....’ ಎನ್ನುವ ಫ್ಟಾಂಟಿಸಿ ಕಲ್ಪನೆಯೊಂದು ಕವಿತೆಯಾಗಿ ವಿಸ್ಮಯದ ವಿನೋದವನ್ನು ಸೃಷ್ಠಿಸುವ ಕವಿತೆಗಳು ಒಳಗೊಂಡಿವೆ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books