ಗನ್ನೇರಿ

Author : ಸ. ರಘುನಾಥ

Pages 340

₹ 300.00




Year of Publication: 2021
Published by: ನಿವೇದಿತಾ ಪ್ರಕಾಶನ
Address: ನಂ. 3437, (1 ನೇ ಮಹಡಿ), 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ, 2ನೇ ಹಂತ, ಬೆಂಗಳೂರು-70
Phone: 9448733323

Synopsys

ಸ.ರಘುನಾಥ ಅವರ ಖಂಡಕಾವ್ಯ ಗನ್ನೇರಿ. ನಿವೇದಿತಾ ನವಸುಮ ಮಾಲೆ-1ರಲ್ಲಿ ಪ್ರಕಟಗೊಂಡ ಕೃತಿಯಿದು. ನಿವೇದಿತಾ ಪ್ರಕಾಶನದ ಉಮೇಶ್ ನಾಗಮಂಗಲ ಅವರು ಈ ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಗನ್ನೇರಿಯಲ್ಲಿ ಬದುಕು ಹುಡುಕುವ ಸಾಮಾನ್ಯ ಸಾಮಾಜಿಕರೇ ಪಾತ್ರಗಳು. ಅವರೇ ಕತೆ ನಡೆಸುವ ಸೂತ್ರದರರು. ಅವರಾರೂ ಕವಿ ನಿಯಂತ್ರಣದಲ್ಲಿಲ್ಲ. ಹಾಗೆ ನೊಡಿದರೆ ಕವಿಯೇ ಅವರ ನಿಯಂತ್ರಣಕ್ಕೆ ಒಳಗಾದಂತೆ ಕಾವ್ಯವನ್ನು ಓದಿದಾಗ ಅನ್ನಿಸದಿರದು. ಪಾತ್ರಗಳು ಮತ್ತು ಕವಿಯ ಅನ್ಯೋನ್ಯತೆಯೇ ಈ ಕೃತಿಯ ಸಹಜತೆ ಅನ್ನಿಸುತ್ತದೆ ಎಂಬುದಾಗಿ ಹೇಳಿದ್ದಾರೆ.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books