ಭಾವತರಂಗ

Author : ಎಂ. ಗೋಪಾಲಕೃಷ್ಣ ಅಡಿಗ

Pages 92

₹ 1.00




Year of Publication: 1947
Published by: ಕಾವ್ಯಾಲಯ
Address: ಮೈಸೂರು

Synopsys

ಕಳೆದ 12-13 ವರ್ಷಗಳಿಂದ (1934-47) ಬರೆದ ಕವಿತೆಗಳ ಸಂಗ್ರಹವಿದು ಎಂದು ಸ್ವತಃ ಕವಿ ಗೋಪಾಲಕೃಷ್ಣ ಅವರು ಕೃತಿಗೆ ಬರೆದ ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಕವಿ ದ.ರಾ.ಬೇಂದ್ರೆ ಬರೆದ ಮುನ್ನುಡಿಯಲ್ಲಿ ’ಅಡಿಗರ ನುಡಿಯಲ್ಲಿ ಕೆಚ್ಚಿದೆ. ಲಾಲಿತ್ಯವಿದೆ. ವಿಧಿಗೆ ಇದಿರಾಗುವ ನಿರ್ವಿಣ್ಣ ಉತ್ಸಾಹವಿದೆ. ಹೊಸ ಬಾಳಿನ ಅನಂತ ಕ್ಷಿತಿಜ ಅವರ ಕಣ್ಣಿನ ಕದಿರಿಗೆ ದುರ್ಬೀನಿನ ಹರಿತ ಕೊಟ್ಟಿದೆ ಎಂದು ಅಡಿಗರ ಕಾವ್ಯವನ್ನು ಪ್ರಶಂಸಿಸಿದ್ದಾರೆ. ಈ ಕವನ ಸಂಕಲನದಲ್ಲಿ 29 ಕವನಗಳಿವೆ. 

About the Author

ಎಂ. ಗೋಪಾಲಕೃಷ್ಣ ಅಡಿಗ
(18 February 1918 - 14 November 1992)

ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು 1918ರ ಫೆಬ್ರುವರಿ 18ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ. ಬೈಂದೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಆಯಿತು. ಬಿ.ಎ. ಆನರ್ಸ್ ಪದವಿ (1942) ಗಳಿಸಿದ ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ್ದರು. ಆಮೇಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ (1947) ಗಳಿಸಿದರು. ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕ (1948-52), ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ (1952-54) ...

READ MORE

Related Books