ಕಾವ್ಯಾಕ್ಷಿ

Author : ಚೆನ್ನವೀರ ಕಣವಿ

Pages 76

₹ 33.00




Year of Publication: 1949
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥ ಮಾಲೆ
Address: ಸಂ. 9, ’ರಮ್ಯ’, ಗೋಕುಲಂ, 3ನೆಯ ಹಂತರ, ಮೈಸೂರು
Phone: 2513821/9880749412

Synopsys

ಹಿರಿಯ ಕವಿ ಚೆನ್ನವೀರ ಕಣವಿ ಅವರ ಮೊದಲ ಕವನ ಸಂಕಲನ. ಇದು 1949ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು. ಈಗ ಮರುಮುದ್ರಣ ಕಂಡಿದೆ. ಈ ಸಂಕಲನದಲ್ಲಿ  ಒಟ್ಟು 34 ಕವಿತೆಗಳಿವೆ.

ರಾಷ್ಟ್ರಕವಿ ಕುವೆಂಪು ಅವರ ನಿಸರ್ಗ ಪ್ರೀತಿ, ಮಧುರಚೆನ್ನರ ಅನುಭಾವ, ಬೇಂದ್ರೆಯವರ ಜಾನಪದ ಸತ್ವ, ಗೋಕಾಕರ ಧ್ಯೇಯವಾದ ಪು.ತಿ.ನ. ಅವರ ಚಿಂತನಪರತೆ ಹಾಗೂ ಕೆ.ಎಸ್.ನರಸಿಂಹಸ್ವಾಮಿಯವರ ಸುಕುಮಾರತೆಗಳನ್ನು ಒಳಗೊಂಡಿರುವ ಕಣವಿಯವರ ಕವಿತೆಗಳ ಆರಂಭದ ಪಲುಕುಗಳನ್ನು ಈ ಸಂಕಲನದಲ್ಲಿ ನೋಡಬಹುದು. ಈ ಸಂಕಲನಕ್ಕೆ ಬರೆದಿರುವ ಮುನ್ನುಡಿಯಲ್ಲಿ ಬೇಂದ್ರೆಯವರು ’ಮಾತೃ ವಾತ್ಸಲ್ಯ, ಮಾತೃಭಾಷಾ ವಾತ್ಸಲ್ಯ, ಸೌಂದರ್ಯ ದೃಷ್ಟಿ, ಅಭೀಪ್ಪೆಯ ತೀವ್ರತೆ, ನವಸ್ವಾತಂತ್ರ್ಯದ ಎಚ್ಚರ, ಹೊಸ ಮೌಲ್ಯಗಳ ಸ್ವೀಕಾರ, ದೇಶಾಭಿಮಾನ, ರಾಷ್ಟ್ರಭಕ್ತಿ, ಆದರ್ಶ ಪ್ರೀತಿ - ಇವೇ ಮೊದಲಾಗಿ ಅವರ ಕಾವ್ಯಸ್ಪೂರ್ತಿಯ ವಿಷಯಗಳಾಗಿವೆ. ಅವರ ಕವನದಲ್ಲಿ ಜೀವಂತ ಗತಿಯಿದೆ. ಮಾತಿಗೆ ಅಚ್ಚುಕಟ್ಟು ಇದೆ. ಅಲ್ಪ ಸಂತುಷ್ಟಿ ಇಲ್ಲ. ಮಹತ್ತಿನ ಕಡೆಯ ಎಳೆತವಿದೆ. ಅವರ ಬೆಳೆವ ಮನಸ್ಸೂ ಅಂತಃಕರಣವೂ ವಿಕೃತ ಕ್ಷೋಭದಿಂದ ಮುದುಡಿಕೊಂಡಿಲ್ಲ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದರು.

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Related Books