ಹಕ್ಕಿ ಚುಕ್ಕಿ

Author : ರಾ.ಹ.ಕೊಂಡಕೇರ

Pages 112

₹ 100.00




Year of Publication: 2020
Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು, ಕೋಡೂರು, ಹೊಸನಗರ, ಶಿವಮೊಗ್ಗ-577418
Phone: 7338437666

Synopsys

‘ಹಕ್ಕಿ ಚುಕ್ಕಿ’ -ಕವಿ ರಮೇಶ ಕೊಂಡಕೇರ ಅವರ ಮೊದಲ ಕವನ ಸಂಕಲನ. ದೇಶಭಕ್ತಿ, ಸಮಾಜದ ಬಗ್ಗೆ ಕಾಳಜಿ, ಸಾವು-ಬದುಕಿನ ಹೋರಾಟ, ಬದುಕಿನ ಸಾಧನೆ... ಹೀಗೆ ಬದುಕಿನ ಭಾವಗಳನ್ನು ಹನಿಗವಿತೆಗಳ ಮೂಲಕ ವಿವರಿಸಿದ್ದಾರೆ.

‘ಮನೆಯಲ್ಲಿ ಹುಟ್ಟಿದರೆ ಹೆಣ್ಣು/ಹತ್ತಿದಂಗ ಮಾಡುತ್ತಾರೆ ಹುಣ್ಣು/ ಅವರಿಗೇನು ಗೊತ್ತು ಮಣ್ಣು/ ಹೆಣ್ಣೇ ಈ ಜಗದ ಕಣ್ಣು’ ಮುನ್ನುಡಿಯಲ್ಲಿ ಗಣೇಶ ಅವರು ಕೃತಿಯ ಕುರಿತು ಬರೆಯುತ್ತಾ, ಹೆಣ್ಣು’ ಶೀರ್ಷಿಕೆಯ ಈ ಹನಿಗವನ ನಮ್ಮ ವ್ಯವಸ್ಥೆಯ ಮನಸ್ಥಿತಿಗೆ ರಪ್ಪೆಂದು ಬಾರಿಸಿದಂತೆ ಭಾಸವಾಗುತ್ತದೆ. ಹೆಣ್ಣನ್ನು ಜಗದ ಕಣ್ಣು ಎಂದು ಹೇಳುವ ಕವಿ, ಹೆಣ್ಣಿನ ಮೌಲ್ಯ ತಿಳಿಯದವರಿಗೆ ಎಷ್ಟು ತಿಳಿ ಹೇಳಿದರೂ ಅಷ್ಟೇ, ಅವರಿಗೆ ಇದೆಲ್ಲ ಅರ್ಥವಾಗುವುದಿಲ್ಲ ಎನ್ನುವ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಲೇ ಆಕೆಯನ್ನು ಜಗದ ಕಣ್ಣು ಎಂದು ಕರೆಯುವ ಮೂಲಕ ಗೆಲ್ಲುತ್ತಾರೆ. ಇದೊಂದು ಉದಾಹರಣೆಯಷ್ಟೇ. ಸಮಾಜದ ಬಗ್ಗೆ ತಮಗಿರುವ ಕಾಳಜಿ, ಅಸಹನೆ, ಸಿಟ್ಟು, ನೋವುಗಳನ್ನೆಲ್ಲ ರಮೇಶ ಅವರು ಈ ಸಂಕಲನದ ಹಲವು ಹನಿಗವನಗಳಲ್ಲಿ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗೆಂದು ಸಂಕಲನದುದ್ದಕ್ಕೂ ಇಂತಹ ಹನಿಗವನಗಳಿವೆ ಎಂದು ಭಾವಿಸಬೇಕಾಗಿಲ್ಲ. ಮೊದಲೇ ಹೇಳಿದಂತೆ ಬದುಕಿನೆಲ್ಲ ಭಾವನೆಗಳೂ ಒಂದು ಪುಟ್ಟ ಹಕ್ಕಿ ನಮ್ಮ ಕಣ್ಣಿಗೆ ಆಗಸದಲ್ಲಿ ಚಲಿಸುವ ಚುಕ್ಕಿಯಾಗಿ ಕಾಣಿಸುವಂತೆಯೇ ಕಾಣಿಸಿಕೊಂಡಿವೆ ಮತ್ತು ನಮ್ಮನ್ನು ಸೆಳೆಯುತ್ತದೆ’ ಎಂದಿದ್ದಾರೆ. ಇದು ಇಲ್ಲಿನ ಹನಿಗವನಗಳ ಭಾವಗಳನ್ನು ವಿವರಿಸುತ್ತದೆ..

About the Author

ರಾ.ಹ.ಕೊಂಡಕೇರ

ಕವಿ ,ಲೇಖಕ ರಾ.ಹ.ಕೊಂಡಕೇರ(ರಾಮಪ್ಪ ಹಣಮಪ್ಪ ಕೊಂಡಕೇರ) ತಂದೆ ಹಣಮಪ್ಪ ,ತಾಯಿ ರಂಗವ್ವ . ಇವರು 8-6-1988 ರಂದು ಜನಿಸಿದರು.ಮೂಲತಃ ಇವರು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾವಲತ್ತಿ ಎಂಬ ಗ್ರಾಮದವರು. ಪ್ರಸ್ತುತ ಇವರು ಧಾರವಾಡದಲ್ಲಿ ರೈಲ್ವೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಡು ಹಲವಾರು ಮೌಲಿಕ ಕೃತಿಗಳನ್ನೂ ಹೊರತಂದಿದ್ದಾರೆ. ನಾಟಕ ರಚನೆ ಅಭಿನಯದ ಜೊತೆಗೆ ಒಳ್ಳೆಯ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.  ಕೃತಿಗಳು : ಹಕ್ಕಿ ಚುಕ್ಕಿ,ಮನದ ಮಾತು(ಹನಿಗವಿತೆಗಳು),ಶ್ರೀ ಲಕ್ಷ್ಮೀ ರಂಗನಾಥನ ಚರಿತ್ರೆ (ಸಂಶೋಧನಾ ಗ್ರಂಥ),ಮೆಟ್ಟಿನ ಪದಗಳು(ಸಂಪಾದಿತ ಕೃತಿ)ಇವು ಪ್ರಕಟಣೆಗೊಂಡಿವೆ. ಶ್ರೀರಂಗನ ಮಹಿಮೆ,ಹಲಗಲಿಯ ಬೇಡರು,ಸರಕಾರಿ ಶಾಲೆ(ನಾಟಕಗಳು) ...

READ MORE

Related Books