ದೀಪವಿಲ್ಲದ ಇರುಳಲ್ಲಿ

Author : ನಾಗರಾಜ ಹೆಗಡೆ ಅಪಗಾಲ

Pages 43

₹ 8.00




Year of Publication: 1992
Published by: ಶ್ರೀಪಾದ್ ಹೆಗಡೆ
Phone: 9481052475

Synopsys

`ದೀಪವಿಲ್ಲದ ಇರುಳಲ್ಲಿ' ಕೃತಿಯು ಕವಿ ನಾಗರಾಜ ಹೆಗಡೆ ಅಪಗಾಲ ಅವರು ಬರೆದ ಕವನ ಸಂಕಲನ. ಕೃತಿಗೆ ಗೌರೀಶ ಕಾಯ್ಕಿಣಿಯವರು ಮುನ್ನುಡಿ ಬರೆದಿದ್ದು, ‘ದೀಪವಿಲ್ಲದ ಇರುಳಲ್ಲಿ ..ಯುವ ಕವಿ ಎನ್.ಜಿ ಅಪಗಾಲರ ಒಂದು ಅಂದವಾದ ಕವನ ಸಂಗ್ರಹದ ಶೀರ್ಷಿಕೆ. ಕವಿಯ ಕಂಪ್ಲೇಂಟು- ‘ನಿಜ ಮಾರಾಯ್ರೇ..! ಬಾಳ ಎಷ್ಟೋ ವಸಂತಗಳಲ್ಲಿ ಅಮವಾಸ್ಯೆ ಇರುಳಲ್ಲೂ ನನ್ನೆದೆಯಲ್ಲಿ ದೀಪವಿರಲಿಲ್ಲ!’. ಆದರೆ ಅಮವಾಸ್ಯೆ ಇರುಳಲ್ಲಿ ಅಲ್ಲ; ಇರುಳಲ್ಲಿಯೇ ಬಾನು ತುಂಬ ತಾರೆಗಳ ಪುಂಜಗಳು ಮಿನುಗುತ್ತಿರುತ್ತವೆ. ಕವಿವರ್ಯ ದಿನಕರ ದೇಸಾಯಿ ಅವರು ಹೇಳುವಂತೆ “ನಕ್ಷತ್ರಗಳು ಇರುಳು ಇರದೆ ಕಾನೂನು ಸಂಪೂರ್ಣ ಬರೆಯುತಿದೆ. ಸಾಕಾಗ ಬಾನು”.. ಅಂದರೆ ದೀಪವಿಲ್ಲದ ಇರುಳಿನಲ್ಲಿಯೂ ಬಾನು ಹಿಡಿಸದಷ್ಟು ತಾರೆಗಳು ತಿಂತಿಣಿಸುತ್ತಿವೆ. ಅದಕ್ಕೆ ಕಟ್ಟಳೆ-ಕಾನೂನು ಬೇಕಿಲ್ಲ. ಆದರೆ ಅಂಧಕಾರ ಕವಿಯ ಎದೆಯಲ್ಲಿ ಕವಿದಿದೆ. ಅಲ್ಲಿ ದೀಪವಿಲ್ಲ. ‘ಬೆಂಕಿಪೊಟ್ಟಣಕ್ಕಾಗಿ’..‘ಅರೆ ಗಳಿಗೆಗೆ ಉರಿಯಲು ಸಾಲುವಷ್ಟು ಎಣ್ಣೆಗಾಗಿ’..ಕವಿ ತಡಕಾಡುತ್ತಿದ್ದಾನೆ. ಈ ಅದೆಷ್ಟೋ ತಡಕಾಟದ ಅರೆಗಳಿಗೆ ಉರಿದ ಕಿಡಿಗಳೇ ಈ ಕವನಗಳು’ ಎಂದಿದ್ದಾರೆ.

About the Author

ನಾಗರಾಜ ಹೆಗಡೆ ಅಪಗಾಲ
(27 May 1971)

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಅಪಗರದಲ್ಲಿ 27-05-1971ರಂದು ಜನಿಸಿದ ಇವರು ಹೊನ್ನಾವರ ಹಾಗೂ ಧಾರವಾಡದಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನ, ಕೃಷಿ, ಸಮುದಾಯ ಶಿಕ್ಷಣ, ಪರಿಸರ ಸಂರಕ್ಷಣೆ, ಸಂಗೀತಗಳಲ್ಲಿ ಸಮಾನ ಆಸಕ್ತಿ. ಕಣ್ಣಂಚಿನ ಕಡಲು ಪ್ರಕಟಿತ ಕವನ ಸಂಕಲನ. ಸಹಸ್ರ ಶೀರ್ಷ, ಅಭಿಯಾನ, ರಾಗಾನುರಾಗ, ಗಣನಾಯಕ, ದಾಂಪತ್ಯ ದೀವಿಗೆ, ಸಮಾಜ ಸಂಸ್ಕೃತಿ -ಸಂಪಾದಿತ ಕೃತಿಗಳು. ಹಲವು ಪತ್ರಿಕೆಗಳಲ್ಲಿಇವರ ಕವನ, ಲೇಖನಗಳು ಪ್ರಕಟಗೊಂಡಿವೆ. ...

READ MORE

Related Books