ಜಿ ಎಸ್ ಶಿವರುದ್ರಪ್ಪ ಸಮಗ್ರ ಕಾವ್ಯ

Author : ಜಿ.ಎಸ್. ಶಿವರುದ್ರಪ್ಪ

Pages 720

₹ 450.00

Buy Now


Year of Publication: 2011
Published by: ಕಾಮಧೇನು ಪುಸ್ತಕ ಭವನ

Synopsys

ಕಳೆದ ನಾಲ್ಕು ದಶಕಗಳ ಕಾಲ ಕಾವ್ಯರಚನೆಯಲ್ಲಿ ತೊಡಗಿದ್ದ  ಶಿವರುದ್ರಪ್ಪನವರು ಕಾವ್ಯವನ್ನು ಮನೋಧರ್ಮವೆಂಬಂತೆ ಉಳಿಸಿಕೊಂಡು ಬಂದವರು. ಇವರಿಗೆ ಕಾವ್ಯವೆನ್ನುವುದು ಸತತ ಶ್ರಮದಿಂದ ಪ್ರಜ್ಞಾಪೂರ್ವಕ ರೂಢಿಸಿಕೊಂಡ ಕೃಷಿಯಲ್ಲ, ಅಥವಾ ಕೇವಲ ಪ್ರಯತ್ನಗಳಿಂದಲೇ ಸಾಧಿಸಬೇಕಾದ ಗುರಿಯೂ ಅಲ್ಲ, ಶಿವರುದ್ರಪ್ಪನವರಿಗೆ ಕಾವ್ಯವೆನ್ನುವುದು ಒಂದು ಮನೋಧರ್ಮ, ಜೀವನಶೈಲಿ, ಹಾಗಾಗಿ ಇವರು ಕಾವ್ಯಸಿದ್ದಾಂತ, ಪಂಥಗಳ ಗೋಜು ಹಚ್ಚಿಕೊಳ್ಳದೆ ಬರೆದರು. ಪಂಡಿತರಿಗಾಗಿ, ವಿಮರ್ಶಕರಿಗಾಗಿ ಬರೆಯದೇ ಸಹೃದಯರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಬರೆದರು. ಶಿವರುದ್ರಪ್ಪನವರಿಗೆ ಕಾವ್ಯವೆನ್ನುವುದು ಭಾಷೆಯೊಂದಿಗೆ ಆಟವೂ ಅಲ್ಲ. ಅವರ ಕಾವ್ಯ ಪ್ರಧಾನವಾಗಿ ನೇರ, ಸರಳ, ಕಾವ್ಯವೆಂದರೆ ಬದುಕನ್ನು ಗ್ರಹಿಸುವ, ಬದುಕಿಗೆ ಪ್ರತಿಕ್ರಿಯಿಸುವ ಒಂದು ರೀತಿ ಮಾತ್ರ. ಹೀಗಾಗಿ ಶಿವರುದ್ರಪ್ಪನವರ ಕಾವ್ಯದಲ್ಲಿ ಬೆಚ್ಚಿಬೀಳಿಸುವಂಥ ಅನುಭವ ಸಾಮಗ್ರಿಯೂ ಇಲ್ಲ; ಭಾಷೆಯೊಂದಿಗೆ ಆಟವಾಡುತ್ತ ಓದುಗನನ್ನು ಮಂತ್ರಮುಗ್ಧಗೊಳಿಸುವಂಥ ಕುಶಲತೆಯೂ ಇಲ್ಲ. ಇವೆರಡೂ ಇಲ್ಲದೆಯೂ ಪ್ರಾಮಾಣಿಕತೆಯೊಂದನ್ನೇ ನೆಚ್ಚಿಕೊಂಡು ಸುತ್ತಲ ಬದುಕು ತನ್ನ ಮನಸ್ಸಿನಲ್ಲಿ ಹುಟ್ಟಿಸಿದ ತರಂಗಗಳನ್ನು ಸಹಜವೆಂಬಂತೆ ಹಾಡುತ್ತ ಬಂದಿರುವ ಕವಿ ಅದರ ಸೋಲು ಗೆಲುವುಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡವರಲ್ಲ. ತಮ್ಮ ಕಾವ್ಯದ ಬಗ್ಗೆ ಯಾವುದೇ ಭ್ರಮೆಗಳನ್ನು ಇಟ್ಟುಕೊಂಡಿಲ್ಲದೆ ಅಥವಾ ಅನಗತ್ಯ ಕೀಳರಿಮೆ ಇಟ್ಟುಕೊಳ್ಳದೆ ಕಾವ್ಯವೆನ್ನುವುದು ತಮ್ಮ ಗ್ರಹಿಕೆ ಮತ್ತು ಅಭಿವ್ಯಕ್ತಿಗಳ ಏಕೈಕ ಅನಿವಾರ್ಯ ಮಾರ್ಗವೆಂಬಂತೆ ಶಿವರುದ್ರಪ್ಪನವರು ಕಾವ್ಯ ರಚಿಸುತ್ತ ಬಂದಿದ್ದಾರೆ. ಹೀಗಾಗಿ ಹಾಡು ಅವರಿಗೆ ಕ್ರೀಡೆಯೂ ಅಲ್ಲ: ವಿಲಾಸವೂ ಅಲ್ಲ. ಅದೊಂದು ಸಂವಹನೆಯ ಕ್ರಮ. ಶಿವರುದ್ರಪ್ಪನವರ ಕಾವ್ಯ ಸಾಧನೆಯನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಶಿವರುದ್ರಪ್ಪನವರ ಕವನಗಳಲ್ಲಿಯೇ ಅವುಗಳ ಉದ್ದೇಶ, ಸ್ವರೂಪಗಳ ಪ್ರಸ್ತಾಪವೂ ಇದೆ. ಜಿ. ಎಸ್. ಶಿವರುದ್ರಪ್ಪನವರು ಬರೆದ ಮತ್ತು ಅನುವಾದಿಸಿದ ಆರು ಕವನಗಳ ಬೃಹತ್ ಸಂಪುಟ 'ಸಮಗ್ರ ಕಾವ್ಯ'. ಸಾಮಗಾನ, ಚೆಲುವು ಒಲವು, ದೇವಶಿಲ್ಪ, ದೀಪದ ಹೆಜ್ಜೆ ಕಾರ್ತಿಕ, ಅನಾವರಣ, ತೆರೆದ ದಾರಿ, ಗೋಡೆ, ಕಾಡಿನ ಕತ್ತಲಲ್ಲಿ, ಪ್ರತಿ ಇಲ್ಲದ ಮೇಲೆ ಮತ್ತು ತೀರ್ಥವಾಣಿ' ಎಂಬ ಹನ್ನೊಂದು ಸಂಕಲನಗಳಲ್ಲಿ ಹಂಚಿಹೋಗಿದ್ದ ಕವನಗಳನ್ನು ಈ ಕೃತಿಯಲ್ಲಿ ಒಟ್ಟು ಸೇರಿಸಲಾಗಿದೆ.

About the Author

ಜಿ.ಎಸ್. ಶಿವರುದ್ರಪ್ಪ
(07 February 1926 - 23 December 2013)

ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...

READ MORE

Related Books