ಸ್ಫೂರ್ತಿ

Author : ಸಂಗಮೇಶ ತಮ್ಮನಗೌಡ್ರ

Pages 40

₹ 20.00




Year of Publication: 2009
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582 102
Phone: 9449074397

Synopsys

ಕವಿ ಸಂಗಮೇಶ ತಮ್ಮನಗೌಡ್ರ ಅವರ ಕವನ ಸಂಕಲನ-ಸ್ಫೂರ್ತಿ. 1991 ರಲ್ಲಿ ಮೊದಲ ಆವೃತ್ತಿ ಕಂಡಿತ್ತು. ದೇಶಕ್ಕೆ ಸ್ವಾತಂತ್ಯ್ರ ಬಂದರೂ ಜನತೆ ಇನ್ನೂ ಹಸಿವು-ಬಡತನದಿಂದ ಮುಕ್ತವಾಗಿಲ್ಲ. ಅನ್ಯಾಯ-ಶೋಷಣೆ ಮುನ್ನಡೆದಿದೆ. ಹಾಗಾದರೆ ಸ್ವಾತಂತ್ಯ್ರ ನಂತರ ಗಳಿಸಿದ್ಧಾದರೂ ಏನು? ಎಂಬ ಜಿಜ್ಞಾಸೆಯಲ್ಲಿ ಇಲ್ಲಿಯ ಕವಿತೆಗಳು ವಸ್ತುವನ್ನು ಹೊಂದಿವೆ.

ಆತ್ಮಾವಲೋಕನದ ಕಾಲ ಮಿಂಚಿಲ್ಲ ಎಂದು ಎಚ್ಚರಿಸುವ ವಸ್ತು ವೈವಿಧ್ಯತೆಯೂ ಇಲ್ಲಿಯ ಕವನಗಳ ಆಶಯವೂ ಆಗಿದೆ. ಯಾಕೆ ಕೂಗುವೆ ಹುಂಜ?, ಕಿತ್ತು ತಿನ್ನುತ್ತಿದೆ ಜನ, ವಿಷ ಸರ್ಪಗಳು ನಾವು, ಬಹಳ ಕಠಿಣ ಮಾತೈತಿ, ಮಡಿವಂತರು ನಾವು ಹೀಗೆ ಸುಮಾರು 39 ಕವಿತೆಗಳು ಸಂಕಲನಗೊಂಡಿವೆ. ಶಬ್ದಾಡಂಬರವಿಲ್ಲದ ಕವಿತೆಗಳು ವಾಸ್ತವತೆಯ ಮೇಲೆ ಕ್ಷ-ಕಿರಣ ಬೀರುತ್ತವೆ. ಮಾನವೀಯ ಕಳಕಳಿಯನ್ನು ಮೆರೆಯುತ್ತವೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books