ಕತ್ತಲ ಧ್ಯಾನಿಸಿದ ನಂತರ

Author : ಉಮೇಶ ನಾಯ್ಕ

Pages 70

₹ 50.00




Year of Publication: 2021
Published by: ಬಂಡಾಯ ಪ್ರಕಾಶನ
Address: ಅರೆ ಅಂಗಡಿ, ಹೊನ್ನಾವ

Synopsys

ಕವಿ ಉಮೆಶ ನಾಯ್ಕ ಅವರ ಎರಡನೇ ಕವನ ಸಂಕಲನ ಇದು. ಸರಳವಾಗಿಯೂ ಮೊನಚಾದ ಭಾಷೆಯಲ್ಲಿರುವ ಈ ಕವಿತೆಗಳು, ನಮ್ಮನ್ನು ಬಂಧಿಸಿಡುವ ವ್ಯವಸ್ಥೆಯ ಸಂಚಿನ ಬಗ್ಗೆ ಸೂಕ್ಷ್ಮವಾಗಿಯೇ ಹೇಳುತ್ತವೆ. ಹೊಸ ಬಗೆಯ ಪ್ರತಿಮೆಗಳ ಮೂಲಕ ಉಮೇಶ ಅವರು ಹೃದಯವಂತ ಭಾಷೆಯೊಂದರ ಸಾನ್ನಿಧ್ಯಕ್ಕಾಗಿ ತವಕಿಸುತ್ತಾರೆ. ಇಲ್ಲಿನ ಕವಿತೆಗಳು ಆಪ್ತವೆನ್ನಿಸುವುದಕ್ಕೆ ಇರುವ ಕಾರಣಗಳಲ್ಲಿ ಈ ತವಕವೂ ಸೇರಿದೆ.

About the Author

ಉಮೇಶ ನಾಯ್ಕ

ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯವರಾದ ಉಮೇಶ ನಾಯ್ಕ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಂಡು ಗಮನ ಸೆಳೆದವರು. ಬರವಣಿಗೆ, ಗಾಯನ, ಶಾಸ್ತ್ರೀಯ ಸಂಗೀತ (ಹಾಡುಗಾರಿಕೆ ಮತ್ತು ತಬಲಾ ವಾದನ), ರಂಗಭೂಮಿ ಮತ್ತು ಸಾಹಿತ್ಯಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಅವರು, ವೃತ್ತಿಯಲ್ಲಿ ಉಪನ್ಯಾಸಕರು. ಕವಿತೆ ಅವರ ಅಭಿವ್ಯಕ್ತಿಯ ಮುಖ್ಯ ಮಾಧ್ಯಮವಾಗಿದ್ದರೂ, ಕವಿತೆಯೇತರ ಬರವಣಿಗೆಯಲ್ಲೂ ತೊಡಗಿಸಿಕೊಂಡಿರುವ ಉಮೇಶ ನಾಯ್ಕ, ಉತ್ತರ ಕನ್ನಡದ ನಾಮಧಾರಿ ಸಮಾಜದ ಬಗೆಗೂ ಅಧ್ಯಯನಪೂರ್ಣ ಕೃತಿ ರಚಿಸಿದ್ದಾರೆ. ಉತ್ತರ ಕನ್ನಡದ ರೈತಹೋರಾಟದ ಹಿನ್ನೆಲೆಯೊಡನೆ ತಮ್ಮ ತಂದೆಯವರ ಕುರಿತು ಅವರು ಬರೆದಿರುವ ಕೃತಿ ಒಂದು ಕಾಲಘಟ್ಟದ ಸಾಂಸ್ಕೃತಿಕ ...

READ MORE

Related Books