ರಮ್ಮಿಯಾಟ

Author : ಸತ್ಯನಾರಾಯಣರಾವ್ ಅಣತಿ

Pages 45

₹ 1.00




Year of Publication: 1966
Published by: ಜಾಗೃತಿ ಕಲಾನಿಕೇತನ್
Address: ಮೈಸೂರು

Synopsys

ಲೇಖಕ ಸತ್ಯನಾರಾಯಣರಾವ್ ಅಣತಿ ಅವರ ಕವನ ಸಂಕಲನ ‘ರಮ್ಮಿಯಾಟ’. ಈ ಕವನ ಸಂಕಲನದಲ್ಲಿ ಹೊಸ ವರುಷ, ಬಿಟ್ಟು ಬಿಡು ಬಡಿವಾರ, ನಿತ್ಯ ರಾಮೋತ್ಸವ, ಅರಘಳಿಗೆ, ಹೊಸ ದಿನ. ಸಂಪಿಗೆಯ ರೋಡಿನಲ್ಲಿ, ಲೋಲಾಕು, ಮಾಗಿ-ಮಂಜು, ರಾತ್ರಿ ರಾಣಿ, ಹಾಡು- ಪಾಡು, ಚಾಪೆ ಹೇಳಿತು, ಕಲ್ಲು ಹೇಳಿತು. ಬಿರುಕು ಬಿಟ್ಟಿದೆ ಗದ್ದೆ . ಓ ಭಾರತ ವೀರ, ಹಾಡುತಿರುವೆನು ಕವಿತೆ ಸೇರಿದಂತೆ ಒಟ್ಟು 28 ಕವಿತೆಗಳು ಸಂಕಲನಗೊಂಡಿವೆ.

ಈ ಕೃತಿಗೆ ಮುನ್ನುಡಿ ಬರೆದ ಕೆ. ಎಸ್. ನಿಸಾರ್ ಅಹಮದ್, ‘ಅಣತಿಯವರ ಮನಸ್ಸು ನಿಸರ್ಗ, ಪ್ರೇಮಗಳ ನಡುವೆ ಓಲಾಡುತ್ತಿರುವುದು ವೇದ್ಯವಾಗುತ್ತದೆ. ಅವುಗಳ ವರ್ಣನೆಯೂ ಸರಳ. ರಾಮೋತ್ಸವ', ಮದುವೆ, ಗಡ್ಡ, ಓಟಿನ ಹಕ್ಕು, ಇತ್ಯಾದಿ ಪದ್ಯಗಳಲ್ಲಿನ ವ್ಯಂಗ್ಯ, ಕಟಕಿಗಳು ಅಣತಿಯವರ ಮುಂದಿನ ಬೆಳವಣಿಗೆಯ ಕಡೆ ಕೈಮಾಡಿ ತೋರಿಸುತ್ತವೆ.’ ಎಂದು ಪ್ರಶಂಸಿದ್ದಾರೆ.

About the Author

ಸತ್ಯನಾರಾಯಣರಾವ್ ಅಣತಿ
(12 December 1935)

ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ.  ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...

READ MORE

Related Books