ಅನರ್ಘ್ಯ

Author : ಆನಂದ ಎ.ಟಿ (ಜಾನಕಿತನಯಾನಂದ)

Pages 170

₹ 120.00




Year of Publication: 2021
Published by: ಶ್ರೇಯಸ್ ಬುಕ್ ಪಬ್ಲಿಕೇಷನ್ಸ್
Address: #31,ವೆನ್ಸಾರಾಯಲ್ ಹರಳುಕುಂಟೆ, ಸೋಮಸುಂದರಪಾಳ್ಯ, ಎಚ್. ಎಸ್. ಆರ್. 2ನೇಯ ಹಂತ ಬೆಂಗಳೂರು-560102
Phone: 9480702134

Synopsys

’ಅನರ್ಘ್ಯ’ ಕೃತಿಯು ಆನಂದ ಎ.ಟಿ (ಜಾನಕಿತನಯಾನಂದ) ಅವರ ಕವನಸಂಕಲನ. ಕೃತಿಗೆ ಹಿತನುಡಿ ಬರೆದಿರುವ ಪ್ರೊಫೆಸರ್ ಡಾ. ನಂದಾ ಅವರು, ಅನರ್ಘ್ಯ ಕವನ ಸಂಕಲನವು ಸಾಮಾಜಿಕ ಕಳಕಳಿ , ರೈತರ, ಸ್ರೀಯರ ಹಾಗೂ ಸೈನಿಕರ ಪಾತ್ರಗಳನ್ನು ಒಳಗೊಂಡು ಕತಾ ಚಿತ್ರಣದಲ್ಲಿ ಸುಂದರವಾಗಿ ಮೂಡಿಬಂದಿದೆ. ಬದುಕಿನ ನಶ್ವರಕ್ಕೆ ಆಧ್ಯಾತ್ಮಿಕ ಪಯಣ ಹಾಗೂ ಬದುಕಿನಲ್ಲಿ ಆಶಾವಾದವನ್ನು ಮೂಡಿಸುವ ಕವಿತೆಗಳು ಅತ್ಯಂತ ಸರಳ ಶಬ್ಧಗಳ ಮೂಲಕ ಓದುಗರನ್ನು ಸೆರೆ ಹಿಡಿಯುತ್ತವೆ. ಪುರಂದರ ದಾಸ ಹಾಗೂ ಕನಕದಾಸರ ವಿಚಾರಗಳು ಈ ಕವಿತೆಯಲ್ಲಿ ಅಲ್ಲಲ್ಲಿ ಕಾಣಸಿಗುತ್ತವೆ. ಹಾಗೆಯೇ, ವಚನಕಾರರ ಪ್ರಭಾವವು ಕವಿತೆಗಳ ಮೇಲೆ ನಿಚ್ಚಳವಾಗಿ ಇರುವುದು ಕಂಡುಬರುತ್ತದೆ. ಭಾರತೀಯ ಸಂಸ್ಕೃತಿಯ ಜೀವಂತಿಕೆಯ ಮೆರುಗು ಕೆಲವು ಕವಿತೆಗಳ ವಸ್ತುವಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಆನಂದ ಎ.ಟಿ (ಜಾನಕಿತನಯಾನಂದ)

ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮದ ಜಾನಕಮ್ಮ ಮತ್ತು ಎ.ತುಳುಜಾಚಾರ್ ಮಗನಾಗಿ ಜನಿಸಿದ ಆನಂದ ಹೆಬ್ಬಾಳು (ಜಾನಕಿತನಯಾನಂದ), ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ವೃತ್ತಿಯಲ್ಲಿ ತಂತ್ರಾಂಶ ವಿಭಾಗದ ಸೀನಿಯರ್ ಮ್ಯಾನೇಜರ್ ಆಗಿ ಪ್ರಸ್ತುತ ಸ್ನೈಡರ್ ಇಲೆಕ್ಟಿಕ್ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು,ಮೂವತ್ತು ವರ್ಷದ ಅನುಭವ ಹೊಂದಿದ್ದಾರೆ..ಜ್ಞಾನಾರ್ಜನೆಗೆ ಉನ್ನತ ವ್ಯಾಸಂಗ ಮುಂದುವರೆಸುವ ಸ್ವಇಚ್ಛೆಯಿಂದ ಈಗ ನ್ಯಾಷನಲ್ ವೇದಿಕ್ ಸೈನ್ಸ್‌ನಲ್ಲಿ ದಾಸಸಾಹಿತ್ಯದ ಒಂದು ವಿಷಯದಲ್ಲಿ ಸಂಶೋಧಕರಾಗಿ (ಪಿ.ಎಚ್.ಡಿ ಸ್ಕಾಲರ್), ಡಾ.ಎನ್.ಕೆ. ರಾಮಶೇಷನ್ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದ್ದಾರೆ. ದಾಸಶ್ರೇಷ್ಠರ ದಾಸಸಾಹಿತ್ಯ, ವಚನಕಾರರ ವಚನಸಾಹಿತ್ಯ, ಜಾನಪದ ಸಾಹಿತ್ಯವನ್ನು ತತ್ವಪದಗಳನ್ನು ಹಾಗೂ ನವೋದಯ ಸಾಹಿತ್ಯ ಅಭ್ಯಾಸ ಮಾಡುತ್ತಾ ಸಾಹಿತ್ಯಾಸಕ್ತಿ ಮೊಳೆತು ಮೂರುದಶಕಗಳಿಂದಲೂ ...

READ MORE

Conversation

Related Books