ಆಸೆಯ ಬೆನ್ನೇರಿ

Author : ಪದ್ಮಾಕರ ಅಶೋಕಕುಮಾರ ಮಟ್ಟಿ

Pages 96

₹ 100.00




Year of Publication: 2021
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಡೊಂಗರಗಾಂವ್, ಕಮಲಾಪುರ ತಾಲೂಕು, ಕಲಬುರಗಿ ಜಿಲ್ಲೆ

Synopsys

ಕವಿ ಡಾ. ಪದ್ಮಾಕರ ಅಶೋಕ ಕುಮಾರ್ ಮಟ್ಟಿ ಅವರ ಕವನ ಸಂಕಲನ- ಆಸೆಯ ಬೆನ್ನೇರಿ. ಒಟ್ಟು 68 ಕವಿತೆಗಳಿವೆ. ವ್ಯಕ್ತಿ ಸುಧಾರಣೆ, ಗಂಡು-ಹೆಣ್ಣಿನ ಸಂಬಂಧ, ರೈತಾಪಿ ಜೀವನ, ದುಡಿಮೆಯ ಮಹತ್ವ, ಪ್ರಕೃತಿಯ ಸೊಬಗು, ಮಳೆ-ಬೆಳೆ ವಿಚಾರ ಹೀಗೆ ವಸ್ತು ವೈವಿಧ್ಯತೆ ಇದೆ. ಮನಸೆಂಬ ಹೊಲ ಹಸನಾಗಲು ವ್ಯಕ್ತಿಗೆ ಹರಿವು ಒಳ್ಳೆ ಪರಿಸರ ಗುರಿ ಸಂಸ್ಕಾರಗಳು ಬೇಕು, ಹೃದಯದಲ್ಲಿ ಪರರ ಪ್ರೀತಿಸುವ ನೀತಿ ಇದ್ದರೆ ಮನಸ್ಸಿನ ಭ್ರಾಂತಿ ಕಳೆದುಹೋಗಿ ಬದುಕಿನ ತುಂಬಾ ನೆಲೆಸುವುದು ಶಾಂತಿ ಎಂಬ ಸಾಲುಗಳು ಕವಿತೆಗಳನ್ನು ಆಪ್ತವಾಗಿಸುತ್ತವೆ. ಗುಳೆ ಹೊರಟ ಗ್ರಾಮೀಣ ಬಡಜನರ ಬದುಕಿನ ವಸ್ತುಸ್ಥಿತಿಯನ್ನು ಕಟ್ಟಿಕೊಡುತ್ತವೆ.

About the Author

ಪದ್ಮಾಕರ ಅಶೋಕಕುಮಾರ ಮಟ್ಟಿ

ಲೇಖಕ ಡಾ. ಪದ್ಮಾಕರ ಅಶೋಕಕುಮಾರ ಮಟ್ಟಿ ಅವರು ಬೀದರ ಜಿಲ್ಲೆಯ ಮೀನಕೇರಿ ಗ್ರಾಮದವರು. ತಂದೆ ಶಿವರಾಜ ಮಟ್ಟಿ, ತಾಯಿ ಗಂಗಮ್ಮ ಮಟ್ಟಿ, ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರಿನ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ, ಹುಮನಾಬಾದಿನಲ್ಲಿ ಬಿಎ ಪದವಿ ಹಾಗೂ ಗುಲಬರ್ಗಾ ವಿ.ವಿ.ಯಿಂದ ಎಂ.ಎ  ಪಡೆದರು. ಯಶವಂತ ಚಿತ್ತಾಲರ ಕಥೆಯಾದಳು ಹುಡುಗಿ ಕಥಾಸಂಕಲನದ ಮೇಲೆ ಎಂ.ಫಿಲ್ ಹಾಗೂ ವಚನಕಾರ ಉರಿಲಿಂಗ ಪೆದ್ದಿ ವಿಷಯವಾಗಿ ಪಿಎಚ್ ಡಿ ಪಡೆದಿದ್ದಾರೆ.  ಸಿರಿಗನ್ನಡ ವೇದಿಕೆಯ ಯಾದಗಿರಿ ಜಿಲ್ಲಾ ಅಧ್ಯಕ್ಷರಾಗಿದ್ದಾರೆ.  ಕೃತಿಗಳು: ತ್ಯಾಗಜೀವಿ, ಕರುಳಬಳ್ಳಿ (ಕವನ ಸಂಕಲನಗಳು) ಜನಪದ ಸಾಹಿತ್ಯ, (ಗುಲಬರ್ಗಾ ವಿ.ವಿ. ಪದವಿ ತರಗತಿಗೆ ಪಠ್ಯವಾಗಿದೆ). ಇವರು ಬರೆದ ಲೇಖನಗಳು, ...

READ MORE

Related Books