ಸಿರಿ ಸಮೃದ್ಧಿ

Author : ವೈ.ಬಿ.ಕಾಂತರಾಜ್‌

Pages 124

₹ 120.00




Year of Publication: 2017
Published by: ಜೇನು ಕಲ್ಲು ಸಿದ್ದೇಶ್ವರ ಪ್ರಕಾಶನ
Address: ಹಾಸನ ಜಿಲ್ಲೆ, ಸಾಲಿಗಾಮೆ ಹೋಬಳಿ 573219

Synopsys

ಸಿರಿ ಸಮೃದ್ಧಿ ವೈ.ಬಿ ಕಾಂತರಾಜ್‌ ಅವರ ಕವನ ಸಂಕಲನವಾಗಿದೆ. ಭೂ ತಾಯಿಯ ಋಣ ತೀರಿಸಲು, ಗಿಡಗಳನ್ನು ಬೆಳೆಸಲು ಭಯ ಭಕ್ತಿಯಿಂದ ನೆಲಜಲಕ್ಕೆ ಮುಂದಿನ ಪೀಳಿಗೆಗೆ ಒಳಿತನ್ನು ಬಯಸುವ ಸಾಧಕನ ಸಾಧನೆಯು ಎಂದೆಂದೂ ಅಮರವೆನ್ನುವ ಹಾಗೆ 'ಸಿರಿ ಸಮೃದ್ಧಿ' ಕವನ ಸಂಕಲನ ಹೊರತರುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ರಾಹುಲ್‌ ಕುಮಾರ್ ಶಹಾಪರ್‌ವಾಡ್ ಐ.ಪಿ.ಎಸ್‌. ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವೈ.ಬಿ.ಕಾಂತರಾಜ್‌

ವೈ.ಬಿ.ಕಾಂತರಾಜುರವರು 1971 ಏಪ್ರಿಲ್ 2ರಂದು ಹಾಸನ ತಾಲ್ಲೂಕಿನ ಯಲಗುಂದ ಗ್ರಾಮದಲ್ಲಿ ಜನಿಸಿದರು. ತಂದೆ ವೈ.ಜೆ.ಬಸವರಾಜು, ತಾಯಿ ಶ್ರೀಮತಿ ಪುಟ್ಟವೀರಮ್ಮ, ಅರಸೀಕೆರೆ ತಾಲ್ಲೂಕಿನ ಬಿಡಾದರಹಳ್ಳಿಯ ಶ್ರೀ ಭೂದೇಶ್ವರ ಸ್ವಾಮಿ ಮಠದಲ್ಲಿ ಮೆಟ್ರಿಕ್‌ ವರೆಗೆ ಶಿಕ್ಷಣ ಪಡೆದ ಇವರು ಪೋಲಿಸ್ ಕಾನ್ಸಟೇಬಲ್ ಆಗಿ ಆಯ್ಕೆಗೊಂಡು ಪ್ರಸ್ತುತ ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಆರಕ್ಷಕ ಇಲಾಖೆಯಲ್ಲಾದರೂ ಪ್ರವೃತ್ತಿಯಲ್ಲಿ ಸಾಹಿತ್ಯ ಹಾಗೂ ಪರಿಸರ ಜಾಗೃತಿಯಲ್ಲಿ ನಿರತರಾಗಿದ್ದಾರೆ. ಕಾವ್ಯ, ಕಥೆ, ವಚನಗಳನ್ನು ಬರೆಯುತ್ತಿರುವ ಇವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ “ಸಿರಿ ಸಮೃದ್ಧಿ” ಕವನ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಸದ್ಯ “ಪ್ರಕೃತಿ ...

READ MORE

Related Books