ಕಾನನದ ಹೂಗಳು

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 80

₹ 40.00




Year of Publication: 2000
Published by: ಕಶೆಟ್ಟಿ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ಸುಭಾಷ್ ಚಂದ್ರ ಕಶೆಟ್ಟಿ, ಬಾಚನಾಳ ಅವರ ಕವನ ಸಂಕಲನ-ಕಾನನದ ಹೂಗಳು. ಸಮಾಜದಲ್ಲಿಯ ಅನ್ಯಾಯ, ಅತ್ಯಾಚಾರ, ಶೋಷಣೆ ಹೀಗೆ ಹಲವಾರು ವಿದ್ಯಮಾನಗಳ ಬಗ್ಗೆ ಕವಿಗಿರುವ ಅಸಮಾಧಾನವನ್ನುಕವಿತೆಗಳು ಪ್ರಕಟಿಸಿವೆ. ಸಮಾಜದ ಉನ್ನತಿಗೆ ಇವೆಲ್ಲವೂ ಮಾರಕವಾಗಿ ಪರಿಣಮಿಸಿವೆ ಎಂಬ ಅಭಿಪ್ರಾಯವೂ ಕಾವ್ಯಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಉತ್ತಮ ವಿಚಾರಗಳಿರಬೇಕು ಎಂದ ಮಾತ್ರಕ್ಕೆ ಕಾವ್ಯವು ಸುಭಾಷಿತ ರೂಪ ಪಡೆಯಬೇಕು ಎಂದರ್ಥವಲ್ಲ. ಕವಿತೆಗಳು ಕಾವ್ಯದ ಸೂಕ್ಷ್ಮತೆಯನ್ನು ಕಳೆದುಕೊಳ್ಳಬಾರದಷ್ಟೆ..! 'ಯಾರು ಗುಣ ಪಡಿಸಲಿಲ್ಲ ನಿನ್ನ ಗುಪ್ತ ರೋಗದ ಯಾತನೆ' 'ಯೌವನದ ಮತವನ್ನು ಮರಕಟನಂತೆ ' ಈ ಮುಂತಾದ ಸಾಲುಗಳಲ್ಲಿ ಕಾವ್ಯದ ಸೆಳಕು ಗಮನ ಸೆಳೆಯುತ್ತದೆ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books