ಕಂಪನಿ ಸವಾಲ್

Author : ಸತೀಶ ಕುಲಕರ್ಣಿ

₹ 50.00




Year of Publication: 2006
Published by: ಲೋಹಿಯಾ ಪ್ರಕಾಶನ
Address: ಕಪ್ಪುಗಲ್ಲು‌ ‌ರಸ್ತೆ‌ ‌ಗಾಂಧೀ‌ ‌ನಗರ‌ ‌ಬಳ್ಳಾರಿ

Synopsys

ಕಂಪನಿ‌ ‌ಸವಾಲ್‌ ‌-ಕವಿ ಸತೀಶ್ ಕುಲಕರ್ಣಿ ಅವರ ಕವನ ಸಂಕಲನ. ‌ಒಟ್ಟು‌ ‌52‌ ‌ಕವಿತೆಗಳಿವೆ.‌ ‌ಜಾಗತೀಕರಣದ‌ ‌ಹಿನ್ನೆಲೆಯಲ್ಲಿ ರಚಿತಗೊಂಡ ಕವಿತೆಗಳಿವು. ಸಾಹಿತಿ ಡಾ.‌ ‌ಎಂ.ಜಿ.‌ ‌ಈಶ್ವರಪ್ಪ‌ ‌ಕೃತಿಗೆ ಬೆನ್ನುಡಿ ಬರೆದು ‘ಚಿಕ್ಕ ಚಿಕ್ಕ ಹಾಗೂ ಪರಿಣಾಮಕಾರಿ ಆಕರ್ಷಕ ರೂಪಕಗಳನ್ನು ಕಟ್ಟುವ ಕವಿ ವಾಸ್ತವದ ನೆಲೆಯಲ್ಲಿ ವಿಜೃಂಭಿಸುತ್ತಾರೆ. ಪ್ರವಾದಿಯಂತೆ ವಚನಗಳಂತಹ ಭಾಷೆಯ ಒಡಲಲ್ಲಿ ಆಕಾರಗೊಳ್ಳುತ್ತಾರೆ. ಬಂಗಲೆಗಳು ನಡುಗದಿದ್ದರೂ, ಗುಡಿಸಲುಗಳು ಗುಡುಗದಿದ್ದರೂ ಭೋರ್ಗರೆವ ಸಮುದ್ರ ಕಾಣುವ ಆಶಾವಾದಿಯಾಗಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಜಾಗತೀಕರಣದ ಪ್ರವಾಹದಲ್ಲಿ ಸಾಂಸ್ಕೃತಿಕ -ಸಾಮಾಜಿಕ ಹಂದರ ಕೊಚ್ಚಿ ಹೋಗುವ ಆತಂಕದ ಭಾವಗಳು ಇಲ್ಲಿಯ ಕವಿತೆಗಳು ಒಳಗೊಂಡಿವೆ

About the Author

ಸತೀಶ ಕುಲಕರ್ಣಿ
(13 July 1951)

ಕವಿ, ಕಲಾವಿದ, ನಾಟಕಕಾರ ಸತೀಶ ಕುಲಕರ್ಣಿ ಅವರು 1951 ಜುಲೈ 13 ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ಲೀಲಾಬಾಯಿ, ತಂದೆ ನೀಲಕಂಠರಾವ್ ಕುಲಕರ್ಣಿ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಇದ್ದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ.  ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿಬಂತುಗಾಡಿ ಮುಂತಾದ ನಾಟಕ ನಿರ್ದೇಶನ ಮತ್ತು ಅಭಿನಯ.   ‘ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್, ಬೆಂಕಿನೀರು, ನೆಲದ ನೆರಳು, ವಿಕ್ಷಿಪ್ತ: ಗಾಂಧಿ ಒಡಲಾಳ ...

READ MORE

Related Books