ಚೈತ್ರ ಚೆಲುವು

Author : ಬಾಗೂರು ಮಾರ್ಕಾಂಡೇಯ

Pages 64

₹ 15.00




Year of Publication: 1996
Published by: ಶ್ರೀ ರಾಘವೇಂದ್ರ ಪ್ರಕಾಶನ
Address: ನಂ 21, 2ನೇ ತಿರುವು, 10ನೇ ಮುಖ್ಯರಸ್ತೆ, ಗುರುರಾಜ ಬಡಾವಣೆ, ಬನಶಂಕರಿ ಮೂರನೇ ಹಂತ, ಬೆಂಗಳೂರು-85
Phone: 9845313583

Synopsys

ಚೈತ್ರ ಚೆಲುವು- ಕವಿ ಬಾಗೂರು ಮಾರ್ಕಾಂಡೇಯ ಅವರು ಬರೆದ ಪ್ರಥಮ ಕವಿತಾ ಸಂಕಲನ. 49 ಕವಿತೆಗಳಿವೆ. ಹೆಚ್ ಎಸ್ ವೆಂಕಟೇಶ ಮೂರ್ತಿ ಅವರು ಬರೆದ ಮುನ್ನುಡಿಯಲ್ಲಿ ‘ಚಿತ್ರರಚನೆ, ಛಾಯಾಗ್ರಹಣ, ಕಾವ್ಯರಚನೆ ಹೀಗೆ ಅನೇಕ ವಿಭಾಗಗಳಲ್ಲಿ ಕವಿ ಬಾಗೂರರ ಕೃಷಿ ನಡೆದಿದೆ. ತರುಣ ಪೀಳಿಗೆಯ ಇವತ್ತಿನ ಗುಂಗುಗಳೇ ಬೇರೆ ಇರುವಾಗ ಮಾರ್ಕಾಂಡೇಯನಂಥವರು ಸದಭಿರುಚಿಯ ಗಂಭೀರ ಮಾರ್ಗಗಳಲ್ಲಿ ತಮ್ಮನ್ನು ತೊಡಗಿಸಿಕೊಡಿದ್ದಾರೆ. ಲೌಕಿಕವಾಗಿ ಲಾಭಪ್ರದವಲ್ಲದ ಇಂತಹ ದಾರಿ ನಡೆಯಿಂದ ಇವರು ನನ್ನ ಪ್ರೀತಿ ಮತ್ತು ಆಸಕ್ತಿಗೆ ಪಾತ್ರರಾಗಿದ್ದಾರೆ ಎಂದು ಅಭಿಮಾನ ತೋರಿದ್ದಾರೆ. ಬೆನ್ನುಡಿ ಬರೆದ ಕವಿ ಡಾ. ಎನ್ ಎಸ್ ಲಕ್ಷ್ಮೀನಾರಾಯಭಟ್ಟರು ‘ಚಿತ್ರರಚನೆಯಲ್ಲಿ ವಿಶೇಷ ಪ್ರತಿಭೆ ಪರಿಶ್ರಮವುಳ್ಳವರು. ಆ ಕ್ಷೇತ್ರದಲ್ಲಿ ಆಗಲೆ ಹೆಸರು ಮಾಡಿದವರು. ಈಗ ಅವರ ಸಾಹಿತ್ಯ ಪ್ರಕಾರಗಳಲ್ಲೆಲ್ಲ ಅತ್ಯಂತ ಗಂಭೀರವಾದ ಮತ್ತು ಸಂಕೀರ್ಣಗತಿಯುಳ್ಳ ಪದ್ಯಮಾಧ್ಯಮದಲ್ಲಿ ತಮ್ಮ ಅನುಭವ ಆಶಯಗಳನ್ನು ಪ್ರಕಟಗೊಳಿಸುವ ಕ್ರಿಯೆ ನನಗೆ ಮೆಚ್ಚಾಗಿದೆ’ ಎಂದು ಪ್ರಶಂಸಿಸಿದ್ದಾರೆ.  ಸಂಕಲನದ ಅನೇಕ ಕವಿತೆಗಳಿಗೆ ಜಿ ವಿ ಅತ್ರಿ ಅವರು ಸ್ವರಸಂಯೋಜನೆ ಮಾಡಿ ಮಕ್ಕಳ ಮೂಲಕವೂ ಹಾಡಿಸಿದ್ದಾರೆ.

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books