ಚೆಲುವು ಒಲವು

Author : ಜಿ.ಎಸ್. ಶಿವರುದ್ರಪ್ಪ

Pages 71

₹ 45.00

Buy Now


Year of Publication: 2013
Published by: ಸಾಹಿತ್ಯ ಭಂಡಾರ
Address: ಜಂಗಮ ಮೇಸ್ತ್ರಿಗಲ್ಲಿ, ಬಳೇಪೇಟೆ, ಬೆಂಗಳೂರು-560053

Synopsys

ಜಿ.ಎಸ್.ಶಿವರುದ್ರಪ್ಪನವರ ಎರಡನೇ ಕವನ ಸಂಕಲನ-ಚೆಲುವು ಒಲವು. ಪು.ತಿ.ನರಸಿಂಹಚಾರ್ಯರು (ಪು.ತಿ.ನ) ಕೃತಿಗೆ ಮುನ್ನುಡಿ ಬರೆದು ‘ಪದ್ಯಗಳ ಸಮಗ್ರ ಭಾವ ಯಾವ ಒಂದು ಸಾಲಿನಲ್ಲೂ ಮಡುಗಟ್ಟಿ ನಿಲ್ಲದೇ ಸಾಲು ಸಾಲಿನಿಂದಲೂ ಭಾವಪ್ರವಾಹಗಳು ಹರಿದು, ಸಮಗ್ರ ಪದ್ಯಗಳಲ್ಲಿ ಮಡುಗಟ್ಟಿ ನಿಂತಿವೆ. ಸುಂದರವಾಗಿ ವ್ಯಾಖ್ಯಾನ ಬೇಡುವ ಪಂಕ್ತಿಗಳಿಗೂ ಇಲ್ಲಿ ಕೊರತೆ ಇಲ್ಲ. ಇವರ ಕವನಗಳ ಮೂಲದಲ್ಲಿ ರಸಸ್ಥಿತಿಯನ್ನು ರಚಿಸುವ ಸತತ ಪ್ರೇರಣೆ ಇದೆ. ರಸಪದಕ್ಕೇರುವ ಎಷ್ಟೋ ಕವನಗಳು ಇಲ್ಲಿಯ ಕಾವ್ಯ ಕೋಶಗಳಲ್ಲಿವೆ’ ಎಂದು ಪ್ರಶಂಸಿಸಿದ್ದಾರೆ. ಮಲ್ಲಿಗೆ, ಹೂಬೆರಳು, ಒಂದಿರುಳು, ಜೀರುಂಡೆ, ಮನದನ್ನೆ ಹೀಗೆ ಒಟ್ಟು 44 ಕವನಗಳಿವೆ. ಕೃತಿಯ ಮೊದಲ ಆವೃತ್ತಿಯು ಮೈಸೂರಿನ ತಳುಕಿನ ವೆಂಕಣ್ಣಯ್ಯನವರ ಸ್ಮಾರಕ ಗ್ರಂಥಮಾಲೆ (1953) ಪ್ರಕಟಿಸಿತ್ತು. 

 

About the Author

ಜಿ.ಎಸ್. ಶಿವರುದ್ರಪ್ಪ
(07 February 1926 - 23 December 2013)

ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...

READ MORE

Related Books