ಬಿಸಿಲು ಮಲ್ಲಿಗೆ

Author : ಅಂಜನಾ ಕೃಷ್ಣಪ್ಪ

Pages 118

₹ 130.00




Year of Publication: 2018
Published by: ದೇವಗೊಂಡನಹಳ್ಳಿ ಪಾಟೀಲ ಪ್ರಕಾಶನ
Address: ಸೋಗಿ (ಅಂಚೆ) ಹೂವಿನಹಡಗಲಿ ತಾಲೂಕು, ಬಳ್ಳಾರಿ ಜಿಲ್ಲೆ- 583219
Phone: 7829349361

Synopsys

‘ಬಿಸಿಲು ಮಲ್ಲಿಗೆ’ ಲೇಖಕಿ ಅಂಜನಾ ಕೃಷ್ಣಪ್ಪ ಅವರ ಕವನ ಸಂಕಲನ. ಬಹುತೇಕ ಕವನಗಳು ಗೇಯಗೀತೆಗಳಾಗಿ ಹೊರಹೊಮ್ಮಿವೆ. ಕವಿತೆಗಳ ಜೀವ ದ್ರವ್ಯ ಅಂತಃಕರುಣವಾಗಿದೆ ಎನ್ನುತ್ತಾರೆ ಸಂಕಲನಕ್ಕೆ ಬೆನ್ನುಡಿ ಬರೆದಿರುವ ಡಾ. ವಸುಂಧರಾ ಭೂಪತಿ. ಇಲ್ಲಿಯ ಕವಿತೆಗಳು ಓದುಗರೊಡನೆ ನಡೆಸುವ ಸಂವಾದಗಳಂತೆ ಭಾಸವಾಗುತ್ತವೆ. 

About the Author

ಅಂಜನಾ ಕೃಷ್ಣಪ್ಪ
(01 June 1953)

ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...

READ MORE

Related Books