ಹಸಿರುಟ್ಟ ಬೆಟ್ಟದ ನಡುವೆ

Author : ಪೂರೀಗಾಲಿ ಮರಡೇಶಮೂರ್ತಿ

Pages 128

₹ 100.00




Year of Publication: 2013
Published by: ಲಿಖಿತ ಸ್ವರೂಪ್ ಪಬ್ಲಿಕೇಷನ್
Address: #60, 2ನೇ ಮಹಡಿ, ಅಲ್ಲಮಪ್ರಭು ಸಂಕೀರ್ಣ, ವೀರಶೈವ ಅನಾಥಾಲಯ ಕಟ್ಟಡ, 5ನೇ ಅಡ್ಡರಸ್ತೆ, ರಾಮಾನುಜ ರಸ್ತೆ, ರಾಜೇಂದ್ರ ಕಲಾಮಂದಿರ ಎದುರು, ಮೈಸೂರು.
Phone: 9449526390

Synopsys

'ಹಸಿರುಟ್ಟ ಬೆಟ್ಟದ ನಡುವೆ ' ಪೂರೀಗಾಲಿ ಮರಡೇಶಮೂರ್ತಿ ಅವರ ಕವನ ಸಂಕಲನ. ಪ್ರಕೃತಿಯ ಚೆಲುವನ್ನು ಮೊಗೆಮೊಗೆದು ಕೊಡುವ ಕವಿತೆಗಳ ಹೂಗುಚ್ಛವಾಗಿದೆ. ಪ್ರಕೃತಿಯೊಡನೆ ಆಪ್ತತೆಯ ಒಡನಾಟವಿದೆ. ಕೆಲ ಕವಿತೆಗಳು ಹೀಗಿವೆ; " ಯಾರೋ ಬರೆದ ಕವಿತೆ ಇದಲ್ಲ ನಿನ್ನಾ ಹೆಜ್ಜೆಗೆ ಗೆಜ್ಜೆ ಮೆರೆದ ಭವ್ಯತೆ !" ಪ್ರಕೃತಿ ಕುರಿತಂತೆ ಸಂಕಲನದ ತುಂಬೆಲ್ಲ ಇಂತದ್ದೇ ಆಶಯ ಹೊತ್ತ ಕವಿತೆಗಳು ತುಂಬಿಕೊಂಡಿವೆ.

ಕವಿ ಬೊಗಸೆ ತುಂಬಾ ಉಣ ಬಡಿಸಿರುವ ಇಲ್ಲಿಯ ಪದ್ಯಗಳು ಹಿಮಚಾದರ ಹೊತ್ತ ಬೆಟ್ಟ ಸಾಲಿನ ಕಥಾಕಾವ್ಯವಾಗಿದೆ. ಬದುಕು ಮತ್ತು ಪ್ರಕೃತಿ ನಡುವಿನ ಮೇಲಾಟಗಳ ಪ್ರೀತಿ ಸಂಘರ್ಷಗಳನ್ನು ಈ ಪದ್ಯಗಳು ಕೊಡುವಲ್ಲಿ ಮೋಸ ಮಾಡುವುದಿಲ್ಲ. ಅದಕ್ಕೆ ಈ ಕೆಳಗಿನ ಪದ್ಯವೇ ಸಾಕ್ಷಿಯಾಗಿದೆ. ' ಬಾನು ಚೆಂದಾವೆ ಭುವಿಯು ಅಂದಾವೆ ಬಾನಕ್ಕಿ ಹೊಳೆದಾವೆ ಭುವಿಯ ಹಕ್ಕಿ ಹಾಡ್ಯಾವೆ '

 

About the Author

ಪೂರೀಗಾಲಿ ಮರಡೇಶಮೂರ್ತಿ
(06 June 1966)

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...

READ MORE

Related Books