ಕವಿಶೈಲದ ಕವಿತೆಗಳು

Author : ಬೇಲೂರು ರಘುನಂದನ್

Pages 120

₹ 80.00




Year of Publication: 2012
Published by: ಶ್ವೇತಪ್ರಿಯ ಪ್ರಕಾಶನ
Address: #216, 5ನೇ ಮುಖ್ಯರಸ್ತೆ, ಕೆನರಾಬ್ಯಾಂಕ್ ಲೇಔಟ್, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ ಅಂಚೆ, ಬೆಂಗಳೂರು- 560097
Phone: 9742606000

Synopsys

‘ಕವಿಶೈಲದ ಕವಿತೆಗಳು’ ಕವಿ, ರಂಗಕರ್ಮಿ ಬೇಲೂರು ರಘುನಂದನ್ ಅವರ ಕವನ ಸಂಕಲನ. ಈ ಕೃತಿಗೆ ದೇಜಗೌ ಹಾಗೂ ಮಳಲಿ ವಸಂತಕುಮಾರ್ ಅವರ ಬೆನ್ನುಡಿ ಬರಹಗಳಿವೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಪ್ರಸ್ತುತ ಕವಿಶೈಲದ ಕವಿತೆಗಳು ಬೇಲೂರು ರಘುನಂದನ್ ಅವರ ಮೂರನೆಯ ಕವನ ಸಂಕಲನ ಇದು ಕೆಲವಾರು ವಿಶೇಷಾಂಶಗಳನ್ನೊಳಗೊಂಡಿದೆ. ಕುವೆಂಪು ಅವರನ್ನು ಮತ್ತು ಕವಿಶೈಲವನ್ನು ಕುರಿತಂತೆ 40 ಕವಿತೆಗಳು ಇಲ್ಲಿವೆ. ಆದರೆ ಯಾವುದೂ ಚರ್ವಿತ ಚರ್ವಣವಲ್ಲ. ಪ್ರತಿ ಕವನದಲ್ಲೂ ಒಂದೊಂದು ಹೊಸ ಹೊಳಹು, ಹೊಸ ನೋಟ ಗೋಚರಿಸುತ್ತದೆ. ತೀರ್ಥಹಳ್ಳಿ ಸಮೀಪದ ಕುಪ್ಪಳ್ಳಿಯ ಕವಿಶೈಲದಲ್ಲಿ ಕುಳಿತು ರಚಿಸಿದ ಕವಿತೆಗಳು, ಕುವೆಂಪು ಅವರೇ ಹೇಳುವಂತೆ ಆರಾದರೇನ್ ತಪಂ ಪೂಜ್ಯಂ ತಪಂ ತನಗೆ ತಾನೇ ದೂರಕರ್ಮಿಯಲ್ತೆ. ಎಂಬ ಮಾತಿಗೆ ಇಲ್ಲಿನ ಕವಿತೆಗಳು ಸಾಕಾರಗೊಂಡಂತಿವೆ ಎಂದಿದ್ದಾರೆ ಮಳಲಿ ವಸಂತಕುಮಾರ್. ’

About the Author

ಬೇಲೂರು ರಘುನಂದನ್
(21 May 1982)

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವೀಧರರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ದಿ ನಾಟಕಗಳು’ ವಿಷಯವಾಗಿ ಎಂ.ಫಿಲ್ ಮತ್ತು ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ವಿಷಯವಾಗಿ ಪಿಎಚ್ ಡಿ ಪದವೀಧರರು.  ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ ನಾಟಕ ಪುಸ್ತಕಗಳು ಪ್ರಕಟಗೊಂಡಿವೆ..  ಬೇಲೂರಿನ ಗಮಕ ವಿದ್ವಾನ್ ಬಿ.ಕೆ. ವನಮಾಲಾ ಅವರ ಮಾರ್ಗದರ್ಶನದಲ್ಲಿ ಪಾರೀಣ (ಸೀನಿಯರ್) ಪ್ರಥಮ ದರ್ಜೆಯಲ್ಲಿ ಗಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ...

READ MORE

Related Books