ರಮ್ಯ ಋತು

Author : ಸ. ಜಗನ್ನಾಥ

Pages 64

₹ 75.00




Year of Publication: 2021
Published by: ಪ್ರಿಯಾ ಪ್ರಕಾಶನ
Address: 39, `ಕವನ’, 13ನೆ ಅಡ್ಡರಸ್ತೆ , 5ನೆ ಮುಖ್ಯರಸ್ತೆ, ಚೌಡಪ್ಪ ಬಡಾವಣೆ , ಬಾಪೂಜಿ ನಗರ, ಮೈಸೂರು ರಸ್ತೆ ಬೆಂಗಳೂರು - 560 026
Phone: 08026748125

Synopsys

ಕವಿ ಸ.ಜಗನ್ನಾಥ ಅವರ ಕವನ ಸಂಕಲನ- ರಮ್ಯ ಋತು. ಕೃತಿಗೆ ಬೆನ್ನುಡಿ ಬರೆದ ಕವಯತ್ರಿ ಹೆಚ್.ಆರ್.ಸುಜಾತಾ ‘ಬರವಣಿಗೆ ಅಷ್ಟು ಸುಲಭವಲ್ಲ. ಮಾತು ಹೇಳಲಾರದ್ದನ್ನು ಕವನದ ಸಾಲುಗಳು, ಪದಗಳು ಕಟ್ಟಿಕೊಡುವ ಹುನ್ನಾರ ಮಾಡುತ್ತವೆ. ಅಂತೆಯೇ ಒಂದು ಧ್ವನಿ ಪ್ರಶ್ನೆಯನ್ನು ಉಳಿಸುತ್ತದೆ. ಕಾಲಮಾನದ, ಜನಜೀವನದ ಹಾಗೂ ಸಮಾಜದ ದಾಖಲೆಯಾಗಿಯೂ ನಿಲ್ಲುತ್ತದೆ. ಬರೆಯಬೇಕೆಂಬ ಹಂಬಲ ಹಾಗೂ ಬರೆಯುತ್ತಾ ಹೋಗುವುದೇ ಒಂದು ಪ್ರಕ್ರಿಯೆ.  ನಿರಂತರ ಪ್ರಕ್ರಿಯೆಗೆ ಇಲ್ಲಿ ಕವಿಗಳು ತಮ್ಮ ಬದುಕಿನ ವಿವಿಧ ಮಜಲುಗಳನ್ನು ಒಳಪಡಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಸ. ಜಗನ್ನಾಥ
(10 October 1954)

ಲೇಖಕ-ಕವಿ ಸ.ಜಗನ್ನಾಥ ಅವರು ಬೆಂಗಳೂರು ವಿಶ್ವ ವಿದ್ಯಾಲಯದಿಂದ ಬಿ.ಎ ಹಾಗೂ  ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದ ವಿಷಯದಲ್ಲಿ ಎಂ.ಎ. ಪದವೀಧರರು. ರಾಮನಗರ ಉಪವಿಭಾಗದಲ್ಲಿ ಕರ್ನಾಟಕ ವಿದ್ಯುಚಕ್ತಿ ಮಂಡಳಿಯಲ್ಲಿ ಬೆರಳಚ್ಚುಗಾರರಾಗಿ, ನಂತರ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದಲ್ಲಿ (ಕಾವೇರಿ ಭವನ), ನಿಗಮ ಕಚೇರಿಯ ಆಂತರಿಕ ಪರಿಶೊಧನಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದರು. ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದು, 1985ರಿಂದಲೂ ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಇವರ ಕವನಗಳು, ಸಣ್ಣ ಕಥೆಗಳು, ರೂಪಕಗಳು, ಕಿರುನಾಟಕಗಳು, ಲೇಖನಗಳು, ಹಾಸ್ಯ ಬರಹಗಳು ಪ್ರಸಾರವಾಗಿವೆ. ಕೃತಿಗಳು: ಚೈತ್ರಪ್ರಿಯಾ(ಕವನ ಸಂಕಲನ-1988), ಅನುರಾಗದ ಆಸರೆ(ಸಾಮಾಜಿಕ ಕಾದಂಬರಿ-1988) ಗಂಗೇ ಗಂಡನ ...

READ MORE

Related Books