ಚಿತ್ತಾರದ ಅಡ್ಡಿಕೆ

Author : ಬಾಗೂರು ಮಾರ್ಕಾಂಡೇಯ

Pages 108

₹ 60.00




Year of Publication: 2012
Published by: ತೇಜು ಪಬ್ಲಿಕೇಷನ್ಸ್
Address: 233, 7ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬೆಂಗಳೂರು-28
Phone: 9900195626

Synopsys

ಚಿತ್ತಾರದ ಅಡ್ಡಿಕೆ-ಕವಿ ಬಾಗೂರು ಮಾರ್ಕಾಂಡೇಯ ಅವರ ಕವನ ಸಂಕಲನ. 72 ಕವಿತೆಗಳಿವೆ. ಕವಿ ಭಾವದ ಲಹರಿಯಂತೆ ಹರಿದು ಪದರೂಪ ಪಡೆದುಕೊಂಡಿದೆ ಈ ಸಂಕಲನ. ಅನೇಕ ಗೀತೆಗಳಾಗಿವೆ. ಸಂಗೀತ ನಿರ್ದೇಶಕರು, ಗಾಯಕರು ಇಲ್ರಿಂಲಿಯ ಬಹುತೇಕ ಕವಿತೆಗಳಿವೆ ಸ್ದವರ ಸಂಯೋಜಿಸಿ ಹಾಡುಗಳಾಗಿ ಪರಿವರ್ತಿಸಿ, ಸಾಹಿತ್ಯದ ಪರಿಣಾಮಕತೆಯನ್ನು ಶ್ರೀಮಂತಗೊಳಿಸಿದ್ದಾರೆ.

‘ ಅಮ್ಮನೆನುವ ಆನಂದವನು ತೋರಲಾಗದು ಜಗದಲಿ ಅಳತೆ ಕೋಲ ಹಿಡಿದು ನಿಂತ ಅಜ್ಞಾನಿಗಳ ಎದುರಲಿ...’ ಎಂದು ತಾಯಿಯ ಹಿರಿಮೆಯ ಶ್ಲಾಘಿಸುವ ಕವಿತೆಯಿಂದ ‘...ಸುಡುಸುಡುವ ನೆಲದಾಳದಲ್ಲೂ ಉಳಿದು ಮೊಳೆತು ನಗುವ ಪ್ರೀತಿ ಸುರಿವ ವರ್ಷಧಾರೆಯಲಿ ಮಿಂದು ತೆನೆ ತಲೆದೂಗುವ ರೀತೆ..’ ಎನ್ನುವ ಪ್ರೀತಿಯ ಸಾಲುಗಳು ಕವನಗಳ ಅರ್ಥವಂತಿಕೆಯನ್ನು ಹೆಚ್ಚಿಸಿವೆ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books