ಪಂಚವರ್ಣದ ಹಂಸ

Author : ಸತ್ಯಮಂಗಲ ಮಹಾದೇವ

Pages 142

₹ 150.00




Year of Publication: 2019
Published by: ಕುವೆಂಪು ಸಾಹಿತ್ಯ ವೇದಿಕೆ
Address: ಶೇಷಾದ್ರಿಪುರ ಸಂಜೆ ಪದವಿ ಕಾಲೇಜು, ಬೆಂಗಳೂರು

Synopsys

ಸತ್ಯಮಂಗಲ ಮಹದೇವ ಅವರು ಮಾನವತಾವಾದಿ ಮಹಾತ್ಮ ಗಾಂಧೀಜಿಗೆ ಅರ್ಪಿಸಿರುವ ಕೃತಿ ಪಂಚವರ್ಣದ ಹಂಸ. ಕವಿತೆಗಳ ಗುಚ್ಚವಾಗಿರುವ ಈ ಕೃತಿ ಇಂದಿನ ಸಮಾಜದ ಕೈಗನ್ನಡಿಯಂತಿದೆ. ಮನುಷ್ಯ ಪ್ರಜ್ಞೆಯಿರುವವರು ಲೋಕದ ಎಡತಾಕುಗಳಿಗೆ ತನ್ನನ್ನು ಈಡುಮಾಡಿಕೊಂಡು ವಿಶ್ಲೇಷಿಸಿಕೊಳ್ಳುವ ಅಗತ್ಯ ಇಂದಿನ ತುರ್ತು ಎನ್ನುವ ಲೇಖಕರು ತಮ್ಮ ಕವಿತೆಗಳ ಮೂಲಕ ಆತಂಕ, ದುಗುಡವನ್ನು ಹೊರಹಾಕುತ್ತಾ, ನಾವು ಪ್ರಶ್ನಿಸುವುದನ್ನು ಕಲಿಯಬೇಕು, ಅವ್ಯವಸ್ಥೆಯ ವಿರುದ್ಧ ಮಾತನಾಡಬೇಕು ಎಂದಿದ್ದಾರೆ. 

ಸತ್ಯಮಂಗಲ ಮಹದೇವ ಅವರು ತಮ್ಮ ಕಾವ್ಯಯಾನದಲ್ಲಿ ಅಗ್ನಿ ಮತ್ತು ನೀರೆಂಬ ಎರಡು ವೈರುಧ್ಯಗಳ ನಡುವೆ ಬಿಗಿದಿರುವ ದಾರದ ಮೇಲೆ ಪಯಣಿಸುತ್ತಿದ್ದಾರೆ. ಒಂದು ಲೋಕದೆಚ್ಚರ ಮತ್ತೊಂದು ಲೋಕಭ್ರಮೆ. ಭ್ರಮೆ ಮತ್ತು ಎಚ್ಚರ ಇಂದಿನ ಪರಿಸ್ಥಿತಿಯಲ್ಲಿ ಒಂದೇ ಎಂದು ನಂಬಿಸುವ ಮಟ್ಟಿಗೆ ಜನರ ಪ್ರಜ್ಞೆಯ ಮೇಲೆ ದಾಳಿ ಮಾಡಲಾಗುತ್ತಿದ.ಎ ಯಾವುದು ಭ್ರಮೆ ಮತ್ತು ಯಾವುದು ಎಚ್ಚರ ಎನ್ನುವ ಹುನ್ನಾರ ಮತ್ತು ಉಪಕಾರಗಳನ್ನು ಅರಿಯುವ ಮನಃಸ್ಥಿತಿಯನ್ನೇ ಬದಲು ಮಾಡಿಬಿಟ್ಟಿವೆ. ಇಂತಹ ಸಂದರ್ಭದಲ್ಲಿ ಪಂಚವರ್ಣದ ಹಂಸ ಸಂಕಲನದ ಕವಿತೆಗಳು ಪ್ರಸ್ತುತ ಎನಿಸುತ್ತವೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ. 

ಈ ಸಂಕಲನದ ಒಂದೆರಡು ಕವಿತೆಗಳು ಓದಿಗಾಗಿ: 

ಗುಡಿ, ಚರ್ಚು, ಮಸೀದಿಗಳೊಳಗೆ 
ಮೈಕು ಬಂದ ದಿನವೇ
ಪ್ರಾರ್ಥನೆ ಅತ್ಯಾಚಾರಕ್ಕೊಳಗಾದಳು

ಎಲ್ಲಿ ಸ್ವಲ್ಪ ಜಾಗ ಕೊಡಿ
ಮಾತನಾಡಬೇಕಿದೆ ನಾನು 
ರಕ್ಕಸ ಏಕಾಂತಗಳ ನಡುವೆ

About the Author

ಸತ್ಯಮಂಗಲ ಮಹಾದೇವ
(12 June 1983)

ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು.  ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ,  ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು.  ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ...

READ MORE

Awards & Recognitions

Related Books