ಪುಟ್ಟಪುಟಾಣಿ ಸ್ವರ್ಣ

Author : ಬಾಗೂರು ಮಾರ್ಕಾಂಡೇಯ

Pages 56

₹ 50.00




Year of Publication: 2012
Published by: ಸಪ್ನ ಬುಕ್ ಹೌಸ್
Address: ಕರ್ನಾಟಕ ಬುಕ್ ಏಜೆನ್ಸಿ, ತುಂಗಾ ಕಾಂಪ್ಲೆಕ್ಸ್, ಗಾಂಧೀನಗರ, ಬೆಂಗಳೂರು-560 09
Phone: 08040114455

Synopsys

ಪುಟ್ಟಪುಟಾಣಿ ಸ್ವರ್ಣ-ಕವಿ ಬಾಗೂರು ಮಾರ್ಕಾಂಡೇಯ  ಅವರು ಮಕ್ಕಳಿಗಾಗಿ ಬರೆದ ಕವಿತೆಗಳ ಸಂಕಲನ. ಬಾಲ್ಯ, ಅದೊಂದು ಪುಟಿದೇಳುವ ಉತ್ಸಾಹ, ಸಂತಸವನ್ನು ಕಟ್ಟಿಕೊಟ್ಟ ಅದ್ಭುತವಾದ ಕ್ಷಣ, ದಿನಗಳು. ಆ ಕ್ಷಣಗಳು ಹಾಗೆ ಇರುವಂತಿದ್ದರೆ... ಹೀಗೇ ಏನೇನೋ ಮನಸ್ಸು ಯೋಚಿಸ ಹೊರಡುತ್ತೆ, ಸಿಗಾತ್ತಾ.... ಸಿಕ್ಕರೂ ನಾವು ಹಾಗಿರಲು ಆಗುತ್ತಾ.... ಮಕ್ಕಳ ಕನಸು, ಕಲ್ಪನೆ, ಚಿಂತನೆ ಕಾರ್ಯವೆಲ್ಲ ವಿಶೇಷವಾಗಿರುತ್ತದೆ. ಹಾಗಾರಗಿ ಆ ಸಂದರ್ಭದಲ್ಲಿಯ ವಿಷಯಗಳನ್ನೇ ಮನೋಭಾವವನ್ನೇ ಕವಿತೆಗಟ್ಟುವ ಪ್ರಯತ್ನವನ್ನು ಕವಿ ಮಾಡಿದ್ದಾರೆ.

‘ಹೆಜ್ಜೆ ಮೇಲೆ ಹೆಜ್ಜೆಹಾಕಿ ಬನ್ನಿ ಮಕ್ಕಳೆಲ್ಲ ಹೆಣೆದುಕೊಳಲಿ ಕೈಗಳು ಸಾಗಿ ಮುಂದೆ ಮಲ್ಲ’ ಎನ್ನುವ  ಕವಿತೆಯ ಸಾಲು ಒಗ್ಗಟ್ಟಿನ ಮಂತ್ರವನ್ನು ಸಾರುತ್ತದೆ. ಸಹಬಾಳುವೆ, ಸಹಜೀವನ, ಒಂದೆಂಬ ಐಕ್ಯತೆ ಪ್ರತೀಕವೇ ಇದು. ‘ಎಂಥಾ ಸುಂದರ ಈ ಜಗವು ನಾವೆಲ್ಲರೂ ಒಂದೇ ಸಂಕುಲವು ...’ ಇಂಥದೊಂದು ಸತ್ಯವನ್ನು ಬಾಲ್ಯದಲ್ಲೇ ಬಿತ್ತುವ ಕೆಲಸ ವಾಗಬೇಕು ಎಂದು ಕವಿ ಆಶಿಸುತ್ತಾರೆ.

‘ಗಗನದಗಲ ಹಾರಬೇಕು ನೋಡಬೇಕು ಊರು ರೆಕ್ಕೆ ಹಚ್ಚುಬಾರೆ ಅಮ್ಮ ಮಾಡದೆ ತಕರಾರು...’ ಮಗುವಿನ ಮನದ ಬಯಕೆಯನ್ನು ಹೀಗೆ ಅಭಿವ್ಯಕ್ತಿಸಬೇಕೆನ್ನುವಂತಿದೆ. ಈ ಮೇಲಿನ ಸಾಲುಗಳು.... ಹೀಗೆ ಕವನ ಸಂಕಲನದಲ್ಲಿ 23 ಕವಿತೆಗಳು ಒಂದಕ್ಕಿಂತ ಒಂದು ಚೆಂದದ ಕವಿತೆಗಳು ಮಕ್ಕಳ ಮನವನ್ನು ಗೆಲ್ಲುತ್ತವೆ.

 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books