ಮಲ್ಲಿಗೆಯ ಮಾಲೆ

Author : ಕೆ.ಎಸ್. ನರಸಿಂಹಸ್ವಾಮಿ

Pages 784

₹ 500.00




Year of Publication: 2012
Published by: ವಸಂತ ಪ್ರಕಾಶನ

Synopsys

ಕನ್ನಡದ ಅತ್ಯುತ್ತಮ ಕವಿಗಳಲ್ಲಿ ಒಬ್ಬರಾದ ಕೆ. ಎಸ್. ನರಸಿಂಹಸ್ವಾಮಿ ಅವರ ಸಮಗ್ರ ಕವನಸಂಕಲನ 'ಮಲ್ಲಿಗೆಯ ಮಾಲೆ'. 'ಮೈಸೂರು ಮಲ್ಲಿಗೆ', 'ಐರಾವತ', 'ದೀಪದ ಮಲ್ಲಿ'. ಉಂಗುರ', 'ಇರುವಂತಿಗೆ', 'ಶಿಲಾಲತೆ', 'ತೆರೆದ ಬಾಗಿಲು', 'ಮನೆಯಿಂದ ಮನೆಗೆ' ಮತ್ತು 'ನವಪಲ್ಲವ ಸಂಕಲನಗಳ ಎಲ್ಲ ಕವಿತೆಗಳಲ್ಲದೆ  ಎಂಟು ಹೊಸ ಕವನಗಳನ್ನು `ಮಲ್ಲಿಗೆಯ ಮಾಲೆ’ ಒಳಗೊಂಡಿದೆ. ಒಟ್ಟು ಇನ್ನೂರ ಐವತ್ತೆಂಟು ಕವನಗಳು ಇಲ್ಲಿವೆ. ನರಸಿಂಹಸ್ವಾಮಿ ಅವರ ಎಪ್ಪತ್ತೆರಡನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಎಲ್ಲ ಕವನಗಳನ್ನು ಒಂದೆಡೆ ಕಲೆಹಾಕಿ ಕಾವ್ಯಪ್ರೇಮಿಗಳ ಕೈಗೆ ಸಿಕ್ಕುವ ಹಾಗೆ ಮಾಡಿದುದರ ಫಲ ಈ ಕೃತಿ. 

About the Author

ಕೆ.ಎಸ್. ನರಸಿಂಹಸ್ವಾಮಿ
(26 January 1915 - 28 December 2003)

ಮೈಸೂರ ಮಲ್ಲಿಗೆಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್. ನರಸಿಂಹಸ್ವಾಮಿ ಅವರು (ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 1915ರ ಜನೆವರಿ 26ರಂದು ಜನಿಸಿದರು. ತಂದೆ ಸುಬ್ಬರಾಯ, ತಾಯಿ ನಾಗಮ್ಮ. ಮೈಸೂರಿನ ಮಹಾರಾಜ ಹೈಸ್ಕೂಲು, ಇಂಟರ್ ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಅವರು ಆರ್ಥಿಕ ತೊಂದರೆಗಳಿಂದ ಡಿಗ್ರಿ ವ್ಯಾಸಂಗವನ್ನು ಪೂರ್ಣ ಮಾಡಲಾಗಲಿಲ್ಲ. 22ನೇ ವಯಸ್ಸಿನಲ್ಲಿ ಗುಮಾಸ್ತೆ ಹುದ್ದೆಗೆ ಸೇರಿದ್ದರು. ಆ ವೇಳೆಗೆ ತಿಪಟೂರಿನ ವೆಂಕಮ್ಮನವರೊಂದಿಗೆ ವಿವಾಹವಾಗಿತ್ತು. ತಮ್ಮ ವೃತ್ತಿಜೀವನದ ಕಾಲದಲ್ಲಿ ಮೈಸೂರು, ನಂಜನಗೂಡು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸರಕಾರಿ ನೌಕರರಾಗಿ ದುಡಿದು ...

READ MORE

Related Books