ಪಾರಿಜಾತದಡಿಯಲಿ

Author : ವಿ.ಕೃ. ಗೋಕಾಕ (ವಿನಾಯಕ)

Pages 142

₹ 30.00




Year of Publication: 1979
Published by: ಸುರುಚಿ ಪ್ರಕಾಶನ
Address: ಸರಸ್ವತೀಪುರ, ಮೈಸೂರು- 570009

Synopsys

‘ಪಾರಿಜಾತದಡಿಯಲಿ’ ಕವಿ ವಿ.ಕೃ. ಗೋಕಾಕ್ ಅವರ ಕವನ ಸಂಕಲನ. 1931ರಿಂದ 1977ರವರೆಗೆ ಅವರು ಬರೆದ ಕವಿತೆಗಳನ್ನು ಸಂಕಲಿಸಿದ್ದಾರೆ. ಈ ಕೃತಿಯಲ್ಲಿ ಗೀತೆಯೊಂದನು, ಪ್ರತಿಜ್ಞೆ, ನಾನು ಕನಸಿಗ, ನಮಸ್ತೆ, ಗವಿ, ಹಾಡಿಗಾವ ನಿರ್ಬಂಧನ, ನಿಶ್ಚಿಂತ, ಬಾಳಗೀತ, ಮಿಂಚಿದ ಮಾತು, ಹಿಂತಿರುಗುವವರೆ ಕಂದ, ಪಾರಿಜಾತದಡಿಯಲಿ, ವಿದ್ಯೆಯ ಗೋಲಾರ್ಧಗಳು, ಪ್ರೀತಿಯ ಒಗಟು, ಏಕಮೇವ, ಮೋಡ, ವೈಮಾನಿಕ ಕಂಡ ಭೂಮಿ, ಘಟಪ್ರಭೆ, ಕಾಶ್ಮೀರ, ಕಾಶ್ಮೀರ ಮಾರ್ಗ, ಪರ್ವತರಾಯ, ಬಿಳಿಮೋಡಗಳು ಸೇರಿದಂತೆ ಸುಮಾರು 58 ಕವಿತೆಗಳಿವೆ.

ಈ ಕವನ ಸಂಕಲನದ ಮೊದಲ ಕೃತಿಯನ್ನು ಇದೇ ಸುರುಚಿ ಪ್ರಕಾಶನವು 1977ರಲ್ಲಿ ಪ್ರಕಟಿಸಿತ್ತು. 

 

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books