ಯಾರ ಹಂಗಿಲ್ಲ ಬೀಸುವ ಗಾಳಿಗೆ

Author : ಸತ್ಯಮಂಗಲ ಮಹಾದೇವ

Pages 104

₹ 80.00




Year of Publication: 2015
Published by: ಸಿವಿಜಿ ಬುಕ್ಸ್

Synopsys

ಸತ್ಯಮಂಗಲ ಮಹಾದೇವ ಅವರು ಭರವಸೆ ಮೂಡಿಸಿರುವ ಕವಿಗಳಲ್ಲಿ ಒಬ್ಬರು. ಇದು ಅವರ ಮೂರನೆಯ ಸಂಕಲನ. ಈ ಸಂಕಲನದ ಬೆನ್ನುಡಿಯಲ್ಲಿ  ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಮಹಾದೇವ ಅವರ ಕವಿತೆಗಳ ಬಗ್ಗೆ  ’ನಮ್ಮ ಕವಿ ಸತ್ಯಮಂಗಲ ಮಹದೇವ ಅತ್ತ 'ವಾಕ್' ಮತ್ತು ಇತ್ತ ಕಾವ್ಯದ 'ಅರ್ಥ' ಎರಡನ್ನೂ ಕೂಡಿಸಿಕೊಳ್ಳುವ ಅಪಾಯವನ್ನು ಕಾವ್ಯಭಾಷೆಯ ಮೂಲಕ ಸಾಧಿಸಿಕೊಳ್ಳುತ್ತಿದ್ದಾರೆ. ಅವರು ಕೇವಲ ಅರ್ಥದ ಪಲಿಯನ್ನು ನೆಮ್ಮಿದವರಲ್ಲ ಇಂಥ ಕಾವ್ಯರಚನೆ ಯಾವತ್ತೂ ಬಿಕ್ಕಟ್ಟಿಗೆ ಒಳಗಾಗುತ್ತದೆ. ಈ ಮಾತು ಕಾಕತಾಳೀಯವಾದರೂ ಸತ್ಯಸ್ಯ ಸತ್ಯ ಕಥನ, ಮಾತಿನ ಮಹತ್ತು ಕಾವ್ಯದಲ್ಲಿ ಅಣುಕ್ಷಣ ಚರ್ಚೆಯಾಗುತ್ತದೆಂಬುದಕ್ಕೆ ಇಲ್ಲಿರುವ ಹಲವು ಕವಿತೆಗಳು ಸಾಕ್ಷಿಯನ್ನು ನುಡಿಯುತ್ತವೆ. ನಮ್ಮ ಕಾಲದ ಕಾವ್ಯದ ಓದಿನ ವಿಸ್ತರಣಿಗೆ ನೆರವಾದ ಕವಿ ಮಹದೇವ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

 

About the Author

ಸತ್ಯಮಂಗಲ ಮಹಾದೇವ
(12 June 1983)

ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು.  ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ,  ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು.  ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ...

READ MORE

Conversation

Awards & Recognitions

Related Books