ನಾನೊಂದು ಮರವಾಗಿದ್ದರೆ

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 65

₹ 35.00




Year of Publication: 1998
Published by: ವಿಶ್ವಾಲಯ ಪ್ರಕಾಶನ
Address: #4/10, ಬಿನ್ನಮಂಗಲ, ಇಂದಿರಾನಗರ, ಬೆಂಗಳೂರು-560038

Synopsys

‘ನಾನೊಂದು ಮರವಾಗಿದ್ದರೆ’ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವನ ಸಂಕಲನ. ಈ ಕೃತಿಗೆ ಕಿ.ರಂ. ನಾಗರಾಜ ಅವರ ಬೆನ್ನುಡಿಯ ಮಾತುಗಳಿವೆ. ಈ ಕವನ ಸಂಕಲನ ಚಿನ್ನಾಸ್ವಾಮಿಯವರು ಈ ತನಕ ಬರೆಯುತ್ತಿದ್ದ ನೆಲೆಗಳನ್ನು ವಿಸ್ತರಿಸುವ ಕಡೆಗೆ ಮುನ್ನೆಡೆದಿದೆ. ಇಲ್ಲಿನ ಕವಿತೆಗಳಲ್ಲಿ ವೈಯಕ್ತಿಕ ಹಾಗು ಸಾಮುದಾಯಕತೆಯ ಪ್ರಶ್ನೆಗಳು ಗಂಭೀರವಾದ ಚಿಂತನೆಗೆ ಗುರಿಯಾಗಿವೆ ಎನ್ನುತ್ತಾರೆ ಕಿ.ರಂ. ನಾಗರಾಜ. ಜೊತೆಗೆ ವೈಯಕ್ತಿಕ ಸೂಕ್ಷ್ಮಗಳ ಮೂಲಕವೇ ಒಂದು ವ್ಯಾಪಕ ಸಂದರ್ಭವನ್ನು ಸಂಘಟಿಸುವ ಕವಿಯ ಪ್ರಯತ್ನಕ್ಕೆ ಸಾಕಷ್ಟು ಯಶಸ್ತು ದೊರೆತಿದೆ ಎಂದಿದ್ದಾರೆ. ನೆನಪು-ನೋವು-ಆತಂಕ- ತಲ್ಲಣಗಳು ರೂಪಕಗೊಂಡು ಓದುಗನಲ್ಲಿ ವಿಶಿಷ್ಟ ಅನುಭೂತಿಗಳ ದಟ್ಟ ವಲಯವನ್ನು ನಿರ್ಮಿಸುತ್ತದೆ. ದಲಿತ ಲೋಕದ ಅನುಭವಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅದನ್ನು ಗಾಢವಾದ ತಿಳುವಳಿಕೆಯಿಂದ ಪರಿಣಾಮಕಾರಿಯಾಗುವಂತೆ ಮಾಡುವ ಶ್ರದ್ದೆ ಇಲ್ಲಿನ ಕವಿತೆಗಳಲ್ಲಿವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books