ಸ್ವಯಂ ಸೇವೆಯ ಗಿಳಿಗಳು

Author : ಕೆ.ಎಸ್. ನಿಸಾರ್ ಅಹಮದ್

Pages 52

₹ 10.00




Year of Publication: 1977
Published by: ಅಂಜನಾ ಪ್ರಕಾಶನ
Address: 137, ಗಾಂಧಿಬಜಾರ, ಬೆಂಗಳೂರು-560004

Synopsys

ಸ್ವಯಂ ಸೇವೆಯ ಗಿಳಿಗಳು’ ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಅವರ ಏಳನೆಯ ಕವನ ಸಂಕಲನ. ಈ ಸಂಕಲನದಲ್ಲಿ ’ಮರೆಯ ಮುಖ, ಮೈಸೂರು ಜೂ, ಧೀಮಂತರು, ಬೀದಿಯ ಮಾರಿ, ನೆನಪೆಲ್ಲಿ ಮಾಸುತ್ತೆ ಪ್ರಿಯೆ, ಅಂತರ, ಮಾದರಿಗಳು, ವೈಜಯಂತಿ, ಮೃಗಾಯಣ, ಸ್ವಯಂಸೇವೆಯ ಗಿಳಿಗಳು, ಈಗ ಮಳೆಗಾಲವಲ್ಲ, ನಮ್ಮ ಬಡಾವಣೆಯ ಕತೆ, ಅಪರೂಪದವಳು, ಸ್ಪಷ್ಟನೆ ಕವಿತೆಗಳಿವೆ.

ಮುಖಪುಟದಲ್ಲಿ ಕವಿಯ ಸೊಗಸಾದ ಭಾವಚಿತ್ರ ಇದ್ದರೆ ಹಿಂಬದಿ ಪುಟದಲ್ಲಿ ನಿಸಾರ್‌ ಅವರ ಹಸ್ತಾಕ್ಷರದಲ್ಲಿ ಬರೆದ ’ಸ್ಪಷ್ಟನೆ’ ಕವಿತೆಯಿದೆ.

About the Author

ಕೆ.ಎಸ್. ನಿಸಾರ್ ಅಹಮದ್
(05 February 1936 - 03 May 2020)

ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ತಾಯಿ ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ. 1936ರ ಫೆಬ್ರುವರಿ 5ರಂದು ಜನಿಸಿದರು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ...

READ MORE

Related Books