ಕಾವ್ಯಕನ್ನಿಕೆ

Author : ಬಾಗೂರು ಮಾರ್ಕಾಂಡೇಯ

Pages 64

₹ 30.00




Year of Publication: 1998
Published by: ಶ್ರೀ ರಾಘವೇಂದ್ರ ಪ್ರಕಾಶನ
Address: ನಂ 21, 2ನೇ ತಿರುವು, 10ನೇ ಮುಖ್ಯರಸ್ತೆ, ಗುರುರಾಜ ಬಡಾವಣೆ, ಬನಶಂಕರಿ ಮೂರನೇ ಹಂತ, ಬೆಂಗಳೂರು-85
Phone: 9845313583

Synopsys

ಕಾವ್ಯಕನ್ನಿಕೆ-ಕವಿ ಬಾಗೂರು ಮಾರ್ಕಾಂಡೇಯ ಅವರ ಕವನ ಸಂಕಲನ. ಪ್ರಕೃತಿಯ ಬಗ್ಗೆ ಬರೆಯುತ್ತ ‘ಮುಂಜಾನೆಯ ಎಳೆಬಿಸಿಲಲಿ ಮಂಜಿನ ಮಣಿ ಸಂತೆ ಮುದಗೊಳುತಿದೆ ಮಾಂದಳಿರಲಿ ಹೊಸ ಕಂಪಿನ ಕವಿತೆ ಎಲೆ ಎಲೆಯೊಳು ನಲಿವುಕ್ಕಿದೆ ಋತುಗೀತೆಯ ಲಯಕೆ ಕಲೆಯರಳಿದೆ ಭುವಿ ಬಾನೋಳು ವಸಂತನ ಆಗಮಕೆ ..’ಎನ್ನುವ ಸಾಲುಗಳು ಸುಂದರ ಪ್ರಕೃತಿಯ ವರ್ಣನೆಯ ಕವಿ ಆಸ್ವಾದಿಸುವ ಸೊಬಗು ಮನಮೋಹಕವಾಗಿದೆ. 42 ಕವಿತೆಗಳಿರುವ ಈ ಸಂಕಲನದಲ್ಲಿ ಅನೇಕ ಕವಿತೆಗಳು ಖ್ಯಾತ ಗಾಯಕರಿಂದ ಹಾಡುಗಳಾಗಿ ಮನಸೆಳೆದಿವೆ.  ಕವಿತೆಗಳು ಸಮಾಜದ ನ್ಯೂನ್ಯತೆಯನ್ನು ಕುಟುಕುಂತೆಯೂ ರಚಿತವಾಗಿರುವುದನ್ನು ಕಾಣಬಹುದು.

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books