ಶಾಂತಿ ಬೀಜಗಳ ಜತನ

Author : ಪ್ರಕಾಶ ಗ. ಖಾಡೆ

Pages 108

₹ 120.00




Year of Publication: 2018
Published by: ಯಾಜಿ ಪ್ರಕಾಶನ
Address: ಭೂಮಿ, ಎಂ.ಪಿ. ಪ್ರಕಾಶನಗರ, ಹೊಸಪೇಟೆ, ಬಳ್ಳಾರಿ
Phone: 9481042400

Synopsys

ನಡೆಯಲು ಬಂದಾಗಿನಿಂದಲೂ 

ಗಡಿ ಸೀಮೆಗಳ ಅಳಿಸಿ

ಸುತ್ತಿ ಸುಳಿಯಬೇಕೆಂದಿದ್ದೇನೆ

ಎಷ್ಟೊಂದು ಬೇಲಿಗಳು

ತಲೆ ಎತ್ತಿವೆ ಇಲ್ಲಿ

ಎಂಬ ಸರಳ ಆತಂಕದ ಜೊತೆಗೆ

ನಾನು ಸತ್ಯವನ್ನು 

ಸುಳ್ಳು ಮಾಡಲು ನೋಡಿದೆ

ಅದೆಷ್ಟು ಸತ್ಯಗಳು ಸುಳ್ಳಾಗಿ ಕುಳಿತಿದ್ದವು

ನಾನು ಬಿಳಿಯ ಮನಸ್ಸುಗಳ ಕಪ್ಪಾಗಿಸಲು ನೋಡಿದೆ

ಅದೆಷ್ಟು ಮನಸ್ಸುಗಳು ಕಪ್ಪಾಗಿಯೇ ಇದ್ದವು

ಹೀಗೆ ಶೀರ್ಷಿಕೆಯಿಲ್ಲದ ಹಲವಾರು ಕವಿತೆಗಳ ಗಂಭೀರ ಚಿಂತನೆಗೆ ಒಡ್ಡುತ್ತವೆ. ಒಳಿತು ಕೆಡುಕುಗಳ ಸಮಾಜದ ವಾಸ್ತವತೆಯನ್ನು ಕವಿತೆಗಳ ಮೂಲಕ ವಿವರಿಸುವ ಪ್ರಯತ್ನವನ್ನು ಕವಿ ಪ್ರಕಾಶ ಅವರು ಮಾಡಿದ್ದಾರೆ. ಇವರ ಕವಿತೆಗಳಲ್ಲಿ ಎಲ್ಲಾ ಅಕ್ಷರಗಳಿಗೆ ಜನಪದ ಕಸುವು ನೀಡಿದ್ದಾರೆ. ಸ್ಪಷ್ಟ ವಿಚಾರ, ಸಮರ್ಥ ನಿರೂಪಣೆ, ಅನಾವಶ್ಯಕ ಶಬ್ದಗಳ ತಡೆ ಹಾಗೂ ಓದುಗನ ಜೊತೆಗೆ ಒಂದು ಸಂವಾದ ಇವು ಡಾ. ಖಾಡೆಯವರ ಕಾವ್ಯದ ವೈಶಿಷ್ಟ್ಯ. 

'ಇಂದಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಯಾರೂ ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ. ಈ ಅಶಾಂತಿಯ ಪರ್ವದಲ್ಲಿ ಕಾವ್ಯ ಮಾತ್ರ ಶಾಂತಿಯನ್ನು ಅರಳಿಸಬಲ್ಲದು. ಕವಿ ಅಕ್ಷರಗಳನ್ನು ಬಿತ್ತಿ ಕಾವ್ಯದ ಬೆಳೆಯನ್ನು ಬೆಳೆಯುತ್ತಾನೆ. ಈ ಬೆಳೆ ಮಾತ್ರ ಜಗತ್ತನ್ನು ಉಳಿಸಬಲ್ಲದು. ಡಾ. ಖಾಡೆಯವರ ಭಾಂಡಾರದಲ್ಲಿ ಶಾಂತಿ ಬೀಜಗಳ ದೊಡ್ಡ ಉಗ್ರಾಣವೇ ಇದೆ. ಅವುಗಳನ್ನು ಜತನವಾಗಿ ಕಾಯ್ದಿರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವನ್ನು ಅವರು ಕಾವ್ಯ ಮಾಧ್ಯಮದ ಮೂಲಕ ಮಾಡುತ್ತಿದ್ದಾರೆ’ ಎಂದಿರುವ ಸರಜೂ ಕಾಟ್ಕರ್‌ ಅವರ ಮಾತುಗಳು ಕಾವ್ಯದ ಅತಂರಾಳವನ್ನು ವಿವರಿಸುತ್ತವೆ. 

About the Author

ಪ್ರಕಾಶ ಗ. ಖಾಡೆ
(10 June 1965)

ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ...

READ MORE

Related Books