ನನ್ನೊಳಗಿನ ಕಾರಂಜಿ

Author : ಚನ್ನಪ್ಪ ಎರೇಸೀಮೆ



Year of Publication: 2021
Published by: ಕೆ. ಸಿ.ಎಂ ಪ್ರಕಾಶನ

Synopsys

ಲೇಖಕ ಚನ್ನಕೇಶವ ಪಾವರ್ ಪಾವಗಡ ಅವರ ’ನನ್ನೊಳಗಿನ ಕಾರಂಜಿ’ ಕೃತಿಯು ಕವನಸಂಕಲನವಾಗಿದೆ. ಕವಿ ಇಲ್ಲಿ ತಮ್ಮ ಕವಿತಾ ರಚನೆಯಲ್ಲಿ ಮಡಿವಂತಿಕೆಯ ಸಂಪ್ರದಾಯಗಳಿಗೆ ಹೆಚ್ಚು ಗಮನಹರಿಸದೇ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮೈಲಿಗಲ್ಲು ಹಾಕಿದ್ದಾರೆ. ಅನುಭವದಲ್ಲಿ ಕೈಹೊಕ್ಕುವ ವಿಷಯ ವಸ್ತುಗಳನ್ನು ತಮ್ಮ ಕವಿತೆಗೆ ಕತಾ ವಸ್ತುವಾಗಿ ಬಳಸಿಕೊಂಡು ಕವನಗಳನ್ನು ಸಾತ್ವಿಕವಾಗಿ ಓದುಗರಿಗೆ ನೀಡಿದ್ದಾರೆ. ಈ ಕವಿತೆಯೊಂದರ ಸಾಲು ಇಲ್ಲಿದೆ. ಕೊಟ್ಟಿದ್ದು ನನ್ನೆಡೆ ಬಚ್ಚಿಟ್ಟಿದ್ದು ಬೆನ್ನೆಡೆ ಅರಿತು ಬಾಳುವ ಭಾವಂ ಸುಖಕೆ ನಾಂದಿ ಯಾದೀತು ಜೀವಂ ಈ ಸಾಲುಗಳು ಇದ್ದಷ್ಟು ದಿನ ಒಳಿತು ಮಾಡಿ ನೀ ನಡೆ ಭಗವಂತನ ಕಡೆ ಎಂಬ ವಚನದ ಸಾಲುಗಳು ನವೀನವಾಗಿ ವಿಜೃಂಭಿಸಿರುವುದಷ್ಟೇ ಅಲ್ಲದೇ ಜಾನಪದಗೀತೆ, ದೇಶ-ಭಕ್ತಿಗೀತೆ, ಭಾವಗೀತೆ, ಭಕ್ತಿಗೀತೆಗಳ ಸಮಗ್ರ ರೂಪಣವು ಇಲ್ಲಿ ಮೂಡಿಬಂದಿದೆ

About the Author

ಚನ್ನಪ್ಪ ಎರೇಸೀಮೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...

READ MORE

Related Books