ಅವಳ ಕವಿತೆ 2015-16

Author : ಸಬಿತಾ ಬನ್ನಾಡಿ

Pages 188

₹ 140.00




Year of Publication: 2017
Published by: ಕವಿ ಪ್ರಕಾಶನ
Address: ಕವಲಕ್ಕಿ, ಹೊನ್ನಾವರ

Synopsys

ಸವಿತಾ  ಬನ್ನಾಡಿ ಅವರು ಸಂಪಾದಿಸಿರುವ ’ಅವಳ ಕವಿತೆ’ ಸಂಕಲನ ೨೦೧೫-೧೬ನೇ ಸಾಲಿನಲ್ಲಿ ಪ್ರಕಟವಾದ ಮಹಿಳೆಯರು ಕವಿತೆಗಳನ್ನು ಒಳಗೊಂಡಿದೆ. ಶಾರದಾ ಎ. ಅಂಚನ್, ಅಕ್ಷತಾ ಹುಂಚದಕಟ್ಟೆ, ಅನಸೂಯಾ ಕಾಂಬಳೆ, ವೈದೇಹಿ, ನಳಿನಾ ಡಿ., ಪ್ರಜ್ಞಾ ಮತ್ತೀಹಳ್ಳಿ, ಪ್ರತಿಭಾ ನಂದಕುಮಾರ್, ಸವಿತಾ ನಾಗಭೂಷಣ್, ಲಲಿತಾ ನಾಯಕ್, ಲಲಿತಾ ಸಿದ್ದಬಸವಯ್ಯ, ಮಮತಾ ಅರಸೀಕರೆ, ಸಂಘಮಿತ್ರೆ ಸೇರಿದಂತೆ ವಿವಿಧ ವಯೋಮಾನದ ಕವಯತ್ರಿಯರ ದನಿ ಇಲ್ಲಿದೆ. ಒಟ್ಟು 56 ಕವಿಗಳ ನೂರಕ್ಕೂ ಹೆಚ್ಚು ಕವಿತೆಗಳು ಸಂಕಲನದಲ್ಲಿವೆ. 

'ಹುತ್ತದ ಬಾಯಿಗಳೆಲ್ಲವೂ ಯೋನಿಗಳಾದವು/ ಸದ್ದಿರದೆ ಒಳಹೊರಗೆ ಸರಿದಾಡಿತು ಹಾವು/ ಸಹಸ್ರ ಯೋನಿಗಳ ದೇಹ/ ಸರ್ವಋತು ಸ್ರಾವ' ಎಂದು ಎಚ್. ಎಸ್. ಅನುಪಮಾ ಬಾಲಕಿಯರ ಅಸಹಾಯಕತೆಯನ್ನು ಬಿಂಬಿಸುತ್ತಾರೆ. 

'ಕವಿತೆ ಅನ್ನುವುದು ಹೆಣ್ಣಿನ ಭಾಷೆ, ಒಡಲ ಹಾಡು ಮತ್ತು ಮಡಿಲ ಮಗು ಬೇರೆ ಬೇರೆಯೇನಲ್ಲ. ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಲು ಅವಕಾಶ ನಿರಾಕರಿಸಲಾದ ಕಾಲದಿಂದಲೂ ಹೆಣ್ಣು ತನ್ನ ಕನಸನ್ನು ತನ್ನ ಹಾಡುಗಳ ಮರೆಯಲ್ಲಿ ಕಾಪಿಟ್ಟುಕೊಂಡಿದ್ದಾಳೆ,’ ಎಂಬ ಎಚ್ಚರದಲ್ಲಿ ಇಲ್ಲಿನ ಕವಿತೆಗಳನ್ನು ಸವಿತಾ ಬನ್ನಾಡಿ ಸಂಪಾದಿಸಿದ್ದಾರೆ. 

“ತಾಯಿ ದೇವಿ' ಕವಿತೆಯಲ್ಲಿ ಅಕ್ಷತಾ ಹುಂಚದ ಕಟ್ಟೆ ಅವರು 'ಮೂರು ದಿನ ಹಸಿದಿದ್ದರೂ | ಉಸುರದಿರು ಹೊರಗೆ' ಎಂದು ಹೆಣ್ಣಿನ ಸುತ್ತ ಹೆಣೆದಿರುವ ಬಲೆಯನ್ನು ಚಿತ್ರಿಸುತ್ತಾರೆ.

About the Author

ಸಬಿತಾ ಬನ್ನಾಡಿ

ಡಾ. ಸಬಿತಾ ಬನ್ನಾಡಿ ಅವರು ಮೂಲತಃ ಉಡುಪಿ ತಾಲೂಕು ಮತ್ತೆ ಜಿಲ್ಲೆಯ ಬನ್ನಾಡಿ ಅವರು. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿ.ಎ ಪೂರ್ಣ ಗೊಳಿಸಿದ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 1988 ರಲ್ಲಿ ಪ್ರಥಮ ಸ್ಥಾನದಲ್ಲಿ ಎಂ.ಎ ಪದವಿಗಳಿಸಿದರು. ಆನಂತರ ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಚರಿತ್ರೆ, ಸಮಾಜ ಮತ್ತು ಸಂಸ್ಕೃತಿ ಅಂತರ್ ಸಂಬಂಧಗಳು ವಿಷಯದಡಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಗಳಿಸಿದರು. ಸದ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆಯಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿ, ಲೇಖಕಿ, ಅಂಕಣಕಾರ್ತಿಯಾಗಿ ಹೆಸರುವಾಸಿಯಾಗಿರುವ ಸಬಿತಾ ಅವರು ಸಂವಾದ ಪತ್ರಿಕೆಯಲ್ಲಿ ...

READ MORE

Related Books