ಇಂದು ರಾತ್ರಿಯ ಹಾಗೆ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 72

₹ 25.00




Year of Publication: 1994
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಇಂದು ರಾತ್ರಿಯ ಹಾಗೆಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಎಂಟನೆಯ ಕವನ ಸಂಕಲನ. 1964ರಲ್ಲಿನೀನಾಸಂಕಲನದಿಂದ ಆರಂಭವಾದ ಕಾವ್ಯಯಾನಇಂದು ರಾತ್ರಿಯ ಹಾಗೆಯಲ್ಲಿ ಮಾಗಿ ನಿಂತಿದೆ. ಕವಿಯ ಭಾವ ಮತ್ತು ಅದನ್ನು ಪದಗಳಲ್ಲಿ ಹಿಡಿದಿಡುವ ಕೌಶಲ್ಯಗಳೆರಡೂ ಹದವಾಗಿ ಮೇಳೈಸಿವೆ. ಈ ಸಂಕಲನದಲ್ಲಿ ಒಟ್ಟು ೩೫ ಕವಿತೆಗಳಿವೆ.

ಆಮಂತ್ರಣ’ ಎಂಬ ಕವಿತೆಯೊಂದಿಗೆ ಆರಂಭವಾಗುವ ಸಂಕಲನದಲ್ಲಿ ಭೂಕಂಪ, ಒಂದು ಕಥೆ, ಗೋಜಲು ಗಜಲು, ಗಾಂಧೀಜಿ, ಅಗ್ನಿದಿವ್ಯ, ಕೃಷಿ, ಶುಷ್ಕಸಿರಿ, ರಹಸ್ಯ ,ಮೊರೆ, ಅಕ್ಕರೆ, ನಿರ್ಣಯ, ಮರ್ಮ ವ್ಯಥೆ, ಹಾಡು, ಅರ್ಥ, ಸಖಿ ನಿನ್ನ ಕೇರಿಯಲಿ, ಆ ಸೊಬಗು ಕಣ್ಣಲ್ಲಿ ಮತ್ತೊಂದು ಮನವಿ, ಕೊನೆಯ ಭೆಟ್ಟಿ, ಅಗತ್ಯವಿಲ್ಲ, ದೇವನೆಲ್ಲಿ, ಎಲ್ಲಿ ಹೋದರೂ, ಕೊನೆಯ ಕವಿತೆ ಎಂಬ ಕವಿತೆಗಳಿವೆ.

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books