‘ಅಂತರಂಗದ ಮೃದಂಗ’ ಕವಯತ್ರಿ ಅನಿತಾ ಪಿ. ಪೂಜಾರಿ ತಾಕೊಡೆ ಅವರ ಕವನ ಸಂಕಲನ. ಇಲ್ಲಿಯ ಕವಿತೆಗಳಲ್ಲಿ ಋತುಗೀತೆಗಳು, ಪ್ರಕೃತಿಗೀತೆಗಳು, ಸೂರ್ಯಚಂದ್ರ ಹಕ್ಕಿಗಳನ್ನು ಕುರಿತ ಕವಿತೆಗಳು ಅವರು ಬದುಕನ್ನು ಹೊಸಬಗೆಯ ನವೋದಯ ಪ್ರಜ್ಞೆಯಲ್ಲಿ ಗ್ರಹಿಸಿ ಭಾಷೆಗೆ ಭಾವರೂಪ ವನ್ನು ಕೊಟ್ಟಿರುವ ಮಾದರಿಗಳಂತೆ ಕಾಣುತ್ತವೆ.
ವ್ಯಕ್ತಿಗಳ ಬಗೆಗಾಗಲಿ, ಸನ್ನಿವೇಶಗಳ ಕುರಿತಾಗಲಿ ಅವರು ಬರೆದಿರುವ ಕವಿತೆಗಳು ಸಾಮಾನ್ಯೀಕರಣಗೊಂಡು ಸಾರ್ವಕಾಲಿಕ, ಸಾರ್ವಜನಿಕ ಭಾವಗಳನ್ನು ಮೀಟುತ್ತವೆ. ಈ ಕಾರಣಗಳಿಂದ ಅನಿತಾ ಪೂಜಾರಿ ಅವರು ಯುವ ತಲೆಮಾರಿನ ಮಹತ್ವದ ಕವಿಗಳಲ್ಲಿ ಒಬ್ಬರೆನಿಸಿಕೊಳ್ಳುತ್ತಾರೆ.
ಅನಿತಾ ಪಿ. ತಾಕೊಡೆ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ತಾಕೊಡೆಯವರು. ಪ್ರಸ್ತುತ ಮುಂಬಯಿ ನಿವಾಸಿ. ಇವರು ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ ಹೆಸರು ಮಾಡಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್ನೊಂದಿಗೆ ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕದ ಅರ್ಹತೆಯನ್ನು ಸಾಧಿಸಿದ್ದಾರೆ. ಇವರು 2019ರಲ್ಲಿ ಮೈಸೂರು ಅರಮನೆಯ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ಇವರ ಎಂಟು ಕೃತಿಗಳು ಲೋಕಾರ್ಪಣೆಗೊಂಡಿವೆ. ಪಿಎಚ್.ಡಿ ಕೋರ್ಸ್ವರ್ಕ್ನ ಸಲುವಾಗಿ ಜಯ ಸಿ. ಸುವರ್ಣರ ಕುರಿತು ಸಿದ್ಧಪಡಿಸಿದ ‘ಸುವರ್ಣಯುಗ’ ಶೋಧ ಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದ ವತಿಯಿದ ಸಂಶೋಧಕಿ ಡಾ.ಲೀಲಾ ಬಿ. ಅವರು ಕೊಡಮಾಡುವ ...
READ MORE