ಪೂರ್ಣಚಂದ್ರನಿಗೆ ಮುಖವಾಡವಿಲ್ಲ

Author : ಫಕೀರ (ಶ್ರೀಧರ ಬನವಾಸಿ ಜಿ.ಸಿ.)

Pages 120

₹ 140.00




Year of Publication: 2021
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: #99, ಶ್ರೀರಕ್ಷಾ, ಕೆಇಬಿ ಎದುರು, ಇಟ್ಟಮಡು ಮುಖ್ಯ ರಸ್ತೆ, ಬನಶಂಕರಿ ಮೂರನೇ ಹಂತ, ಬೆಂಗಳೂರು-560 085

Synopsys

ಶ್ರೀಧರ ಬನವಾಸಿ ಅವರ ಕವಿತೆಗಳ ಸಂಗ್ರಹ ಪೂರ್ಣ ಚಂದ್ರನಿಗೆ ಮುಖವವಾಡವಿಲ್ಲ. ಈ ಸಂಕಲನಕ್ಕೆ ಡಾ.ಪ್ರದೀಪಕುಮಾರ್ ಹೆಬ್ರಿ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಫಕೀರ ಅವರ ‘ಪೂರ್ಣ ಚಂದ್ರನಿಗೆ ಮುಖವವಾಡವಿಲ್ಲ’ ಸಂಕಲನದ ಕವಿತೆಗಳು ತಮ್ಮ ಜನ್ಮ ಸಾರ್ಥಕತೆಯನ್ನು ಕಂಡುಕೊಂಡಿವೆ. ಕವಿಯೂ ಸಾರ್ಥಕತೆಯನ್ನು ಅನುಭವಿಸಿದ್ದಾನೆಂದು ನಾವು ನಿಖರವಾಗಿ ಹೇಳಬಹುದು. ಬದುಕನ್ನು ಬಗೆದು ನೋಡುವ ಚಿಕಿತ್ಸಕ ದೃಷ್ಟಿ , ಪ್ರಕೃತಿ ಪ್ರೇಮ, ವಿಶ್ವಾನುಕಂಪ..ಇವು ಕವಿಗಿರಬೇಕಾದ ಮೂಲದ್ರವ್ಯ. ಇವು ಕವಿ ಶ್ರೀಧರ ಬನವಾಸಿ ಅವರಲ್ಲಿ ಸಮೃದ್ಧವಾಗಿದೆ. ‘ಪೂರ್ಣಚಂದ್ರನಿಗೆ ಮುಖವಾಡ’ವಿಲ್ಲದಿದ್ದರೂ ಪೂರ್ಣಚಂದ್ರನಾಗುವ ತನಕ ಮಾನವ ತನ್ನ ಬದುಕೆನುವ ಮುಖವಾಡದೊಳಗೇ ತನ್ನ ಇರವು ಹಾಗೂ ಅರಿವನ್ನು ತೋರುತ್ತಿರಬೇಕೆಂದು ನಿರ್ಧರಿಸಿ ಈ ಸಂಕಲನದ ನಲ್ವತ್ತೊಂದು ಕವನಗಳಿಂದ ಮುಖವಾಡದೊಳಗಿನ ಬದುಕು ಮತ್ತು ಮುಖವಾಡ ಕಳಚಿದಂತೆ ಸಿಗಬಹುದಾದ ಒಳಿತುಗಳ ಅನಾವರಣ ಮಾಡಿದ್ದಾರೆ ಎಂಬುದಾಗಿ ಮುನ್ನುಡಿಯಲ್ಲಿ ಪ್ರದೀಪಕುಮಾರ್ ಹೆಬ್ರಿ ಅವರು ಬರೆದಿದ್ದಾರೆ.

About the Author

ಫಕೀರ (ಶ್ರೀಧರ ಬನವಾಸಿ ಜಿ.ಸಿ.)
(06 February 1985)

'ಫಕೀರ’ ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಕತೆ-ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ 1985 ಫೆಬ್ರುವರಿ 6 ರಂದು ಜನಿಸಿದರು. ಬನವಾಸಿ ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ. ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಇರುವ ಅವರು ‘ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ‘ಬೇರು’ ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ. ಶ್ರೀಧರ್ ಅವರು ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ...

READ MORE

Related Books